ಮಂಜೇಶ್ವರ, ಅ.12 (DaijiworldNews/HR): ವಾಹನ ಅಪಘಾತದ ಹಿನ್ನಲೆಯಲ್ಲಿ ರಾಷ್ಟೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಅಧಿಕ ಸಮಯ ಸಂಚಾರ ಅಸ್ತವ್ಯಸ್ಥಗೊಂಡಿತು.
ಸಾಂದರ್ಭಿಕ ಚಿತ್ರ
ಮೀನು ಹೇರಿಕೊಂಡು ಮಂಗಳೂರಿನಿಂದ ಬರುತ್ತಿದ್ದ ಪಿಕಪ್ ವ್ಯಾನ್ ಮತ್ತು ಕಾಸರಗೋಡು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಹೊಸಬೆಟ್ಟು ಎಂಬಲ್ಲಿ ಅಪಘಾತ ನಡೆದಿದೆ.
ಅಪಘಾತದಿಂದ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಅಪಘಾತದಿಂದ ನಜ್ಜುಗುಜ್ಜಾದ ಪಿಕಪ್ ನಲ್ಲಿ ಸಿಲುಕಿದ್ದ ಚಾಲಕ ಸೇರಿದಂತೆ ಇಬ್ಬರನ್ನು ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು, ನಾಗರಿಕರು ಹೊರತೆಗೆದರು.
ಗಾಯಗೊಂಡ ಇವರಿಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.