ಉಡುಪಿ, ಅ.10 (DaijiworlNews/HR): ಅಲೆವೂರು ಚಿಟ್ಪಾಡಿಯಲ್ಲಿ ರಾತ್ರಿ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಯುವತಿಯೋರ್ವಳು ಅಸಹಾಯಕರಾಗಿ ನೊಂದಿರುವ ಮಹಾರಾಷ್ಟ್ರ ಮೂಲದ ಯುವತಿಯನ್ನು ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ನಗರ ಪೋಲಿಸ್ ಠಾಣಾ ಸಹಾಯದಿಂದ ಸಖಿ-ಒನ್-ಸ್ಟಾಪ್ ಸೆಂಟರ್ಗೆ ದಾಖಲಿಸಿರುವ ಘಟನೆ ನಡೆದಿದೆ.
ಯುವತಿ ಮೀನಾ (26 ) ಮಹಾರಾಷ್ಟ್ರ ಮೂಲದವಳೆಂಬ ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ರಾತ್ರಿಯೇ ರಕ್ಷಣೆಯಾಗಿರುವುದರಿಂದ ಸಂಭಾವ್ಯ ದುರಂತವು ತಪ್ಪಿದೆ. ಯುವತಿ ಬರೀ ಕಾಲ್ನಡಿಗೆಯಲ್ಲಿ ನಡೆದು ಸುಸ್ತಾಗಿದ್ದಳು. ರಕ್ಷಣಾ ಸಮಯ ತುರ್ತು ಆಹಾರ ನೀಡಲಾಗಿ ಆರೈಕೆ ಮಾಡಲಾಯಿತು. ಸಂಬಂಧಿಕರು ಇದ್ದಲ್ಲಿ ನಗರ ಠಾಣೆ ಅಥವಾ ಸಖಿ-ಒನ್-ಸ್ಟಾಪ್ ಸೆಂಟರ್ ಗೆ ಸಂಪರ್ಕಿಸಬೇಕಾಗಿ ವಿಶು ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಪ್ರಜ್ಪಲ್ ಹೆಗ್ಡೆ(ಮರ್ಣೆ ಪಂಚಾಯತ್ ಸದಸ್ಯ) ಹಾಗೂ ಮಹಿಳಾ ಪೋಲಿಸ್ ರೂಪರವರು ಸಹಕರಿಸಿದರು.