ಕಾವೂರು, ಅ.10 (DaijiworlNews/HR): ತಂಡದಿಂದ ಸಹೋದರರ ಮೇಲೆ ಹಲ್ಲೆ ನಡೆದಿರುವ ಆರೋಪದ ಮೇರೆಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಆರೋಪಿಯಿಂದ ಹಲ್ಲೆಗೊಳಗಾದವನಿಗೆ ಕರೆಯ ಮೂಲಕ ಬೆದರಿಕೆ ನೀಡಿದ ವಿಚಾರವಾಗಿ ಸಹೋದರರ ಮತ್ತು ತಂಡಗಳ ಮಧ್ಯೆ ಹಲ್ಲೆ ನಡೆದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಹೋದರರು ದಾಖಲಾಗಿದ್ದಾರೆ.
ಇನ್ನು ಸೋಡಾ ಬಾಟಲ್, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವುದಾಗಿ ದೂರು ನೀಡಲಾಗಿದೆ.
ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.