ಟೊರೋಂಟೋ, ಅ. 08 (DaijiworldNews/SM): ಕೆನಡಾದ ಒಂಟೇರಿಯೋ ಪ್ರಾಂತ್ಯದ ತುಳುಕೂಟವು “ಮೀಟ್ ಆ್ಯಂಡ್ ಗ್ರೀಟ್” ಕಾರ್ಯಕ್ರಮವನ್ನು ಇತ್ತೀಚಿಗೆ ಪೌಲ್ ಕೊಫೇ ಪಾರ್ಕ್ ಮಿಸ್ಸಿಸ್ಸಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಲುವತ್ತಕ್ಕೂ ಹೆಚ್ಚು ತುಳು ಕುಟುಂಬಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸಂಘಟಕರಾದ ಸುದರ್ಶನ್ ಶೆಟ್ಟಿ ಮಾತಾಡಿ “ಈ ಒಂದು ಮಿಲನ ತುಳು ಕುಟುಂಬಗಳನ್ನು ವಿದೇಶದಲ್ಲಿ ಒಗ್ಗೂಡಿಸುವಲ್ಲಿ ಪ್ರಥಮ ಹೆಜ್ಜೆಯಾಗಿದೆ. ಮುಂದಿನ ಪೀಳಿಗೆಗೆ ನಮ್ಮ ಮಣ್ಣಿನ ಸಂಸ್ಕೃತಿಯ ಅರಿವು ಮೂಡಿಸಲು ಇದು ವೇದಿಕೆಯಾಗಬೇಕೆಂದರು.
ಮುಂಬರುವ ದಿವಸಗಳಲ್ಲಿ ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ಈ ಕೂಟವು ಆಯೋಜಿಸಲಿದೆ, ಇನ್ನಷ್ಟು ತುಳು ಕುಟುಂಬಗಳು ಬೆಳೆಯಬೇಕು. ಅದಕ್ಕಾಗಿ ಪ್ರತಿಯೊಬ್ಬ ಸದಸ್ಯರು ತುಳುವ ಕುಟುಂಬಗಳನ್ನು ಕೂಟಕ್ಕೆ ಕೂಡಿಸುವಲ್ಲಿ ಕೈ ಜೋಡಿಸಬೇಕು ಎಂದರು.
ಇನ್ನು ಈ ಸಂದರ್ಭ ಸಹಸಂಯೋಜಕ ಮನೋಜ್ ಡಿಕುನ್ಹಾ, ವಿಜಯ್ ಶೆಟ್ಟಿ, ವಿನಯ ಅಮೀನ್ ಸುನೀತ ಅಮ್ಮಣ್, ಕಿಶೋರ್ ಶೆಟ್ಟಿ(ರಾಧಕೃಷ್ಣ ರೆಸ್ಟೋರೆಂಟ್) ಸಿಂಧು ಕುಲಾಲ್ ಭಾಗವಹಿಸಿದ್ದರು.
ಕಾರ್ಯಕ್ರಮದ ಸಾಂಸ್ಕೃತಿಕ ಸಂಯೋಜಕರಾದ ಲಿಯೋ ರೇಗೊ ವಿವಿಧ ಮನೋರಂಜನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ವಿಜೇತರಿಗೆ ಬಹುಮಾನ ವಿತರಣೆ ಕೂಡ ನಡೆಯಿತು. ಬಹುಮಾನದ ಆಯೋಜಕರು ವಿಕಾಸ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಮನೋಜ್ ಡಿಕುನ್ಹಾ, ಲಿಯೋ ರೇಗೋ, ಕಿಶೋರ್ ಶೆಟ್ಟಿ ಭಾಗವಹಿಸಿದ್ದರು.