ಉಡುಪಿ, ಅ.08 (DaijiworlNews/HR): ಮಳೆಗಾಲ ಆಗಿರುವುದರಿಂದ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ವ್ಯತ್ಯಯವಾಗಿದ್ದು, ಕಳೆದ ಹತ್ತು ಹದಿನೈದು ದಿನಗಳಿಂದ ಈ ಸಮಸ್ಯೆ ಇದ್ದು, ಮುಂದಿನ ನಾಲ್ಕೈದು ದಿನದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಸ್ಥಗಿತ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು, "ಮಳೆಗಾಲ ಆಗಿರುವುದರಿಂದ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಕಳೆದ ಹತ್ತು ಹದಿನೈದು ದಿನಗಳಿಂದ ಈ ಸಮಸ್ಯೆ ಇದ್ದು, ಇಂದು ಬೆಳಗ್ಗೆಯೂ ಕೇಂದ್ರ ಸಚಿವರ ಜೊತೆ ಮಾತನಾಡಿದ್ದೇನೆ. ಒರಿಸ್ಸಾ ಮತ್ತು ಮಹಾರಾಷ್ಟ್ರದಿಂದ ಕಲ್ಲಿದ್ದಲು ಪೂರೈಕೆ ಆಗಲಿದ್ದು, ಮುಂದಿನ ನಾಲ್ಕೈದು ದಿನದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ" ಎಮ್ದರು.
ಇನ್ನು "ಹಿರಿಯ ಅಧಿಕಾರಿಗಳ ಜೊತೆ ಇಂದು ಮಾತುಕತೆ ಮಾಡಲಾಗಿದ್ದು, ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.ಬಳ್ಳಾರಿ ಮತ್ತು ರಾಯಚೂರು ನಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆಗಿದ್ದು, ಅಲ್ಲಿಗೆ ಶೀಘ್ರ ಕಲ್ಲಿದ್ದಲು ಪೂರೈಕೆ ಮಾಡುತ್ತೇವೆ. ಇಂದು ರಾತ್ರಿ ಮತ್ತೊಮ್ಮೆ ಕೇಂದ್ರ ಸಚಿವರ ಜೊತೆ ಮಾತನಾಡುತ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿ ಪ್ರವಾಸದಲ್ಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ" ಎಂದು ಹೇಳಿದ್ದಾರೆ.
ಇನ್ನು "ಗೋ ಕಳ್ಳತನ ಹೆಚ್ಚುತ್ತಿರುವ ಬಗ್ಗೆ, ಗೋ ಕಳ್ಳತನ ಈಗ ನಿಯಂತ್ರಣಕ್ಕೆ ಬರುತ್ತಿದೆ. ಹಿರಿಯಾಧಿಕಾರಿಯೊಂದಿಗೆ ಚಚೆ ನಡೆಸಿದ್ದೇನೆ. ಹಿಂದೆ ಗೋ ಕಳ್ಳತನ ಮಾಡಿರುವವರನ್ನು ವಿಚಾರಣೆ ಮಾಡಲು ಸೂಚನೆ ಕೂಡ ನೀಡಲಗಿದೆ. ಇದನ್ನು ಜಿಲ್ಲಾಡಳಿತ ಸಹಿಸಲ್ಲ. ಈಗ ಬಿಜೆಪಿ ಸರಕಾರ ಇದೆ. ಈ ಕೃತ್ಯವನ್ನ ಯಾವುದೇ ಕಾರಣಕ್ಕೂ ಸಹಿಸಲ್ಲ. ಕಠಿಣ ಕಾನೂನು ತೆಗೆದುಕೊಳ್ಳುತ್ತೇವೆ. ಗೊ-ಕಳ್ಳತನ ನಿಷೇಧ ಕಾಯ್ದೆಯಲ್ಲಿ ಯಾವುದೇ ಬದಲಾವಣೆಯ ಅಗತ್ಯ ಇಲ್ಲ. ಆದರೆ ಈಗ ಕೋರ್ಟ್ ನಲ್ಲಿ ಸ್ಟೇ ತರಲಾಗಿದ್ದು, ನಾವು ಮೇಲ್ಮನವಿ ಹಾಕಿದ್ದೇವೆ. ಮುಂದಿನ ತಿಂಗಳು ಕಾಯ್ದೆ ಜಾರಿಯಾಗಬಹುದು ಎನ್ನುವ ಭರವಸೆ ಇದೆ" ಎಂದರು.