ಮಂಗಳೂರು, ಅ.08 (DaijiworlNews/HR): ವಾಮಂಜೂರಿನ ಮೂಡುಶೆಡ್ಡೆಯಲ್ಲಿ ಗುರುವಾರದಂದು ಯುವಕರ ತಂಡವೊಂದಕ್ಕೆ ರೌಡಿಶೀಟರ್ಗಳ ತಂಡವೊಂದು ಚಾಕು ತೋರಿಸಿ ಬೆದರಿಕೆಯೊಡ್ಡಿರುವ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಎರಡು ಪ್ರಕರಣಕ್ಕೆ ಸಂಬಂಧಿದಂತೆ ಇಮ್ರಾನ್, ರಿಝ್ವಾನ್, ರಮೀಝ್, ಮುಸ್ತಾಫ್, ಶಾರೂಕ್, ಅಷ್ಪಕ್, ಮನೋಜ್ ಮೂಡುಶೆಡ್ಡೆ, ವೀರ್ಷ್ ಮೂಡುಶೆಡ್ಡೆ ಎಂಬವರನ್ನು ಬಂಧಿಸಲಾಗಿದೆ.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಪೋಸ್ಟರ್ ಹಾಕಿದ್ದಕ್ಕೆ ಅಷ್ಪಕ್ ಎಂಬಾತನಿಗೆ ಭಜರಂಗದಳ ಕಾರ್ಯಕರ್ತ ವಿವೇಕಾನಂದ ಹೆದರಿದ್ದು, ಇದರಿಂದ ಗುಂಪುಕಟ್ಟಿಕೊಂಡು ಬಂದು ವಿವೇಕಾನಂದ ಮೇಲೆ ದಾಳಿಗೆ ಯತ್ನ ನಡೆದಿದೆ..
ಇನ್ನು ವಿವೇಕಾನಂದ ಅಲ್ಲೇ ಪಕ್ಕದಲ್ಲಿರುವ ಅಂಗಡಿಯೊಳಗೆ ನುಗ್ಗಿ ಏಳು ಜನರ ತಂಡದಿಂದ ಬಚಾವಾಗಿದ್ದಾನೆ ಎನ್ನಲಾಗಿದೆ.
ಹಲ್ಲೆ ವಿಡಿಯೋ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.