ಕಾಸರಗೋಡು, ಅ 08 (DaijiworldNews/MS): ಪರ್ಸ್ ಎಗರಿಸಿದ್ದ ಕಳ್ಳನೊಬ್ಬ ಅದರಲ್ಲಿದ್ದ ಬೆಲೆ ಬಾಳುವ ದಾಖಲೆಗಳನ್ನು ಪೋಸ್ಟ್ ಮೂಲಕ್ದ ಅದರ ವಾರಸುದಾ ರರಿಗೆ ತಲುಪಿಸಿದ ಸ್ವಾರಸ್ಯಕರ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಕಾಸರಗೋಡು ಆಸ್ಪತ್ರೆಗೆ ಬಂದಿದ್ದ ಪೊಯಿನಾಚಿಯ ಕೆ. ಮಾಧವನ್ ನಾಯರ್ ಅವರ ಪರ್ಸ್ ಬಸ್ನಲ್ಲಿ ಕಳ್ಳತನವಾಗಿತ್ತು. ಅದರಲ್ಲಿ ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿಗಳಿದ್ದವು. ಕಳವಾದ ಮೂರನೇ ದಿನಕ್ಕೆ ಅವರ ಪರ್ಸ್ ನಲ್ಲಿದ್ದ ಎಲ್ಲ ದಾಖಲೆಗಳು ಅಂಚೆ ಮೂಲಕ ಅವರ ಕೈಸೇರಿದೆ.
ಪರ್ಸ್ನಲ್ಲಿ 7 ಸಾವಿರ ರೂ.ಗಳನ್ನು ಕಳ್ಳ ಇರಿಸಿಕೊಂಡಿದ್ದಾನೆ. ತಮ್ಮ ಪರ್ಸ್ ಕಳವಾಗಿರುವ ಕುರಿತು ಸ್ಥಳೀಯಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದ ಅವರು ದಾಖಲೆ ಪತ್ರ ಸಿಕ್ಕಿದವರು ಮರಳಿಸುವಂತೆ ಕೋರಿದ್ದರು.