ಕಾಸರಗೋಡು, ಅ. 07 (DaijiworldNews/SM): ರೇಬೀಸ್ ನಿಂದ ಏಳು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ.
ಚೆರ್ವ ತ್ತೂರು ಆಲಂತಟ್ಟಿನ ಥೋಮಸ್ ರವ ರ ಪುತ್ರ ಎಂ.ಕೆ.ಆನಂದ್ ಮೃತಪಟ್ಟ ಬಾಲಕ. ಆಲಂತಟ್ಟು ಎಯುಪಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದನು.
ಸೆ. 13ರಂದು ಮನೆ ಸಮೀಪ ಬೀದಿ ನಾಯಿ ಕಡಿತಕ್ಕೊಳಗಾಗಿದ್ದ. ಮೂರು ದಿನಗಳ ಹಿಂದೆ ಅಸ್ವಸ್ಥಗೊಂಡ ಬಾಲಕನನ್ನು ಕೋಜಿಕ್ಕೋಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ರೇಬಿಸ್ ಪತ್ತೆಯಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬಾಲಕ ಮೃತಪಟ್ಟಿದ್ದಾನೆ. ನಾಯಿ ಕಡಿತಕ್ಕೊಳಗಾದ ಬಳಿಕ ಬಾಲಕನಿಗೆ ಎರಡು ಬಾರಿ ಚುಚ್ಚು ಮದ್ದು ನೀಡಲಾಗಿತ್ತು. ಆದರೆ ರೇಬಿಸ್ ನಿಂದ ಬಾಲಕ ಮೃತಪಟ್ಟ ಬಗ್ಗೆ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.