ಕಾಸರಗೋಡು, ಅ.07 (DaijiworldNews/HR): ಕ್ಷುಲ್ಲಕ ಕಾರಣಕ್ಕೆ ಗ್ಯಾರೇಜ್ ನೌಕರನಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕ ಪುತ್ತೂರು ನಿವಾಸಿಯೋರ್ವನನ್ನು ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪಾಲೆತ್ತಾಡಿಯ ಶೇಕ್ ಹಮೀದ್ (50) ಎಂದು ಗುರುತಿಸಲಾಗಿದೆ.
ವಿಜೀಶ್(37) ಎಂಬವರನನ್ನು ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.
ಅಕ್ಟೋಬರ್ ಎರಡರಂದು ಘಟನೆ ನಡೆದಿತ್ತು. ಗ್ಯಾರೇಜ್ ಹೊಂದಿರುವ ಕಟ್ಟಡದ ಮೇಲಂತಸ್ತಿನಲ್ಲಿ ಶೇಕ್ ಹಮೀದ್ ವಾಸವಾಗಿದ್ದು, ಈ ಕಟ್ಟಡಕ್ಕಿರುವ ಗೇಟ್ ನ್ನು ತೆರೆಯಲು ವಿಳಂಬವಾದುದ್ದನ್ನು ಪ್ರಶ್ನಿಸಿದ್ದು, ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಚಾಕುವಿ ನಿಂದ ವಿಜೇಶ್ ರನ್ನು ಇರಿದಿದ್ದರು. ಶೇಕ್ ಹಮೀದ್ ವಿರುದ್ಧ ಕೊಲೆ ಯತ್ನ ಮೊಕದ್ದಮೆ ದಾಖಲಿಸಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.