ಮಂಗಳೂರು, ಅ 08 (DaijiworldNews/MS): ಮಂಗಳೂರು ತಾಲೂಕು ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ ಕಿಲೆಂಜಾರು ಗ್ರಾಮಕ್ಕೆ ವಿಶೇಷ ಅನುದಾನದಲ್ಲಿ 81 ಲಕ್ಷ ರೂ, ಮಳೆ ಹಾನಿ ಅನುದಾನದಲ್ಲಿ 42 ಲಕ್ಷ ರೂ, ಎಂಆರ್ಪಿಎಲ್ ಸಮಾಜ ಕಲ್ಯಾಣ ನಿಧಿಯಿಂದ 94.1 ಲಕ್ಷ ರೂ, ಸಣ್ಣ ನೀರಾವರಿ ಇಲಾಖೆಯಿಂದ 1.51 ಕೋಟಿ ರೂ ಸೇರಿ ಒಟ್ಟು 4 ಕೋಟಿಗೂ ಅಧಿಕ ಮೊತ್ತದ 16 ಕ್ಕೂ ಅಧಿಕ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಕುಪ್ಪೆಪದವಿನಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕ ಭರತ್ ಶೆಟ್ಟಿ ಒಂದು ಗ್ರಾಮದ ಅಭಿವೃದ್ಧಿ ಕೇವಲ ರಸ್ತೆ,ತೋಡು, ಚರಂಡಿ ಕಾಮಗಾರಿಗಳಿಂದ ಮಾತ್ರ ಆದ್ರೆ ಸಾಧ್ಯ ಆಗದು ಇದು ಕೇವಲ ಮೂಲ ಸೌಕರ್ಯಗಳಾಗಿವೆ ಇದ್ರೊಂದಿಗೆ ಒಂದು ಗ್ರಾಮದ ಅಭಿವೃದ್ಧಿಗೆ ಬೇಕಾಗುವ ಶೈಕ್ಷಣಿಕ ಯೋಜನೆ, ಆರೋಗ್ಯ ಯೋಜನೆ ಸೇರಿ ವಿವಿಧ ರೀತಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಅಭಿವೃದ್ಧಿ ಪಥದತ್ತ ನಾವು ಚಿತ್ತ ಆಯಿಸುವ ಅಗತ್ಯತೆ ಇದೆ.ಇನ್ನೂ ಈ ಭಾಗಕ್ಕೆ ಈಗಾಗಲೆ ಸರಿಸುಮಾರು 4 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ನೆರವೇರಿದ್ದು ಇನ್ನೂ ಒಂದು ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳು ನಡೆಯಲಿದೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಗಮನ ಹರಿಸಲಿದ್ದೇವೆ ಈ ಅಭಿವೃದ್ಧಿ ಕಾರ್ಯಕರ್ತರ ಉತ್ಸಾಹ ಮೂಲಕ ಕಾರಣ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುಚ್ಚೂರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ್ ಗೌಡ ಮುಚ್ಚೂರ್, ಗ್ರಾಮಪಂಚಾತ್ ಸದಸ್ಯರುಗಳಾದ ನಿತೇಶ್, ಮಂಜುಳಾ, ವಿಜಯ, ಮಂಗಳೂರು ಉತ್ತರ ಮಹಿಳಾ ಮೊರ್ಚದ ಪ್ರಧಾನ ಕಾರ್ಯದರ್ಶಿ ಅರುಣ, ಜಗನ್ನಾಥ್ ಶೆಟ್ಟಿ, ಪ್ರಸನ್ನ ಅಡಪ ಮತ್ತಿತರರು ಉಪಸ್ಥಿತರಿದ್ದರು