ಮಂಗಳೂರು, ಅ 08 (DaijiworldNews/MS): ಸುರತ್ಕಲ್ ಅ.5 ರಂದು ಬಜರಂಗದಳ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಕೋಮು ವೈಷಮ್ಯ ಹೆಚ್ಚಿಸುವ ಪ್ರಚೋಧನಕಾರಿ ಭಾಷಣ ಹಾಗೂ ಕೋಟಿ- ಚೆನ್ನಯರ ಆಯುಧವನ್ನು ರೌಡಿಗಳು ಬಳಸುವ ತಲವಾರಿಗೆ ಹೋಲಿಸಿ ಪವಿತ್ರ ನಂಬಿಕೆಗೆ ಘಾಸಿ ಉಂಟು ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಸಂಯೋಜಕರಾದ ಬಂಟ್ವಾಳದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಸುರತ್ಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಂದು ಕೋಮಿನವರನ್ನು ಎತ್ತಿ ಕತ್ತುವ ಕೋಮು ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಇದರಿಂದ ಕಾನೂನು ಸುವ್ಯವ್ಸ್ಥೆಗೆ ಧಕ್ಕೆ ಆಗಲಿದ್ದು ಈಕೆಯ ಹಾಗೂ ಬಜರಂಗದಳ ಸಂಘಟಕರ ವಿರುದ್ದ ಕೇಸು ದಾಖಲಿಸಬೇಕು. ಇದರ ಜೊತೆಗೆ ಕಾಂಗ್ರೆಸ್ ಮುಖಂಡರ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿ ಅವಮಾನ ಮಾಡಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕೋಮು ಪ್ರಚೋದಕ ಭಾಷಣದ ವಿರುದ್ದ ಸುರತ್ಕಲ್ ಅಬ್ದುಲ್ ಖಾದರ್ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.