ಕಾಸರಗೋಡು, ಅ.06 (DaijiworldNews/PY): ವ್ಯಾಪಾರ ಮಳಿಗೆಗೆ ನುಗ್ಗಿದ ಕಳ್ಳರು ಸುಮಾರು 50 ಸಾವಿರ ರೂ. ನಗದು ಕಳವುಗೈದ ಘಟನೆ ನಾಟೆಕಲ್ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ನಾಟೆಕಲ್ ಪೇಟೆಯ ದಾಮೋದರ ಬಲ್ಲಾಳ್ ಅವರ ವ್ಯಾಪಾರ ಮಳಿಗೆಯ ಬೀಗ ಮುರಿದು ಕಳ್ಳರು ಒಳನುಗ್ಗಿದ್ದು, ಮೇಜಿನಲ್ಲಿದ್ದ ನಗದನ್ನು ಕಳವು ಮಾಡಿರುವುದಾಗಿ ದೂರಿದ್ದಾರೆ.
ಬುಧವಾರ ಬೆಳಗ್ಗೆ ಮಳಿಗೆಯ ಬಾಗಿಲು ತೆರೆಯಲು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಬೇರೊಬ್ಬರಿಗೆ ನೀಡಲು ಹಣ ತಂದಿಟ್ಟಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.