ಮಂಗಳೂರು, ಅ 06 (DaijiworldNews/MS): ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ವರ್ಷಾಚರಣೆಯನ್ನು ಈ ಬಾರಿ ಆಯೋಜಿಸಲಾಗುತ್ತಿದೆ.
ಅದರ ಅಂಗವಾಗಿ ಇದೇ ಅಕ್ಟೋಬರ್ 31ರಂದು ಆಚರಿಸಲಾಗುವ ರಾಷ್ಟ್ರೀಯ ಐಕ್ಯತಾ ದಿನದ ಹಿನ್ನಲೆಯಲ್ಲಿ ಕೈಗಾರಿಕಾ ಭದ್ರತಾ ಪಡೆಯಿಂದ ಸೈಕಲ್ ರ್ಯಾಲಿಯನ್ನು ಏರ್ಪಡಿಸಲಾಗಿದೆ.
ಗುಜರಾತ್ ವರೆಗೆ ಸಂಚರಿಸಲಿರುವ ಅದಕ್ಕೆ ಈಗಾಗಲೇ ಕೇರಳದ ತಿರುವನಂತಪುರಂ ನಲ್ಲಿ ಚಾಲನೆಯೂ ನೀಡಿದ್ದು, ಅದು ಸಾಗುವ ಹಾದಿಯಾದ ಮಂಗಳೂರಿನ ನವಬಂದರಿಗೆ ಅ.6ರ ಬುಧವಾರ ಆಗಮಿಸಿತು.
ಈ ಸಂದರ್ಭದಲ್ಲಿ ಸೈಕಲ್ ರ್ಯಾಲಿಯನ್ನು ಎನ್ಎಂಪಿಟಿಯ ಹಾಗೂ ಸಿಐಎಸ್ಎಫ್ ನ ಸಿಬ್ಬಂದಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ಸಿಐಎಸ್ಎಫ್ ನ ಡೆಪ್ಯೂಟಿ ಕಮಾಂಡೆಂಟ್ ಅಶುತೋಷ್ ಗೌರ್, ಎನ್.ಎಮ್.ಪಿ.ಟಿ ಯ ಡೆಪ್ಯೂಟಿ ಕಮಾಂಡೆಂಟ್ ಬಿಕ್ರಮ್ ಸೇರಿದಂತೆ ಸಿಐಎಸ್ಎಫ್ ನ ಮತ್ತು ಎನ್.ಎಮ್.ಪಿ.ಟಿ ಯ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.