ಮಂಗಳೂರು, ಅ.05 (DaijiworldNews/HR): ಸೆಪ್ಟೆಂಬರ್ 28 ರಂದು ಆರ್ಶೀವಾದ್ ಪೆಟ್ರೋಲ್ ಬಂಕ್ನ ಮ್ಯಾನೇಜರ್ ಬೋಜಪ್ಪನವರು ಹಣ ಕಟ್ಟಲು ಬ್ಯಾಂಕಿಗೆ ಹೋಗುತ್ತಿದ್ದಾಗ ಬ್ಯಾಟ್ನಿಂದ ಹಲ್ಲೆ ನಡೆಸಿ, 4.20 ಲಕ್ಷ ರೂ. ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 28 ರಂದು ಈ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ಶಕ್ತಿನಗರದ ಶ್ಯಾಮ್ ಶಂಕರ್, ಕುಡುಪು ಮೂಲದ ಅಭಿಷೇಕ್, ಕಾರ್ತಿಕ್ ಮತ್ತು ಸಾಗರ್ ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ಬೋಜಪ್ಪ ಕೆಲಸ ಮಾಡುತ್ತಿದ್ದ ಅದೇ ಪೆಟ್ರೋಲ್ ಪಂಪ್ನಲ್ಲಿ ಶ್ಯಾಮ್ ಶಂಕರ್ ಹಲವು ವರ್ಷಗಳಿಂದ ಉದ್ಯೋಗಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆತ ಮತ್ತು ಇತರ ಆರೋಪಿಗಳು ಸೆಪ್ಟೆಂಬರ್ 13 ರಂದು ಶಕ್ತಿನಗರದಲ್ಲಿ ದರೋಡೆ ಮಾಡಲು ಯೋಜಿಸಿದ್ದರು. ಆದರೆ ಅದು ವಿಫಲವಾದ ಹಿನ್ನಲೆಯಲ್ಲಿ ಸೆಪ್ಟೆಂಬರ್ 28 ರಂದು ದರೋಡೆ ಮಾಡಿ ಮುಂಬೈಗೆ ತೆರಳಿದ್ದಾರೆ.
ಆರೋಪಿಯಿಂದ 60,00 ರೂಪಾಯಿ ನಗದು, ವಾಹನ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು ಇದರಲ್ಲಿ ಕೊಲೆ, ಗಲಭೆ, ಸುಲಿಗೆ ಸೇರಿದ್ದು, ಆರೋಪಿಗಳು ಹಣವನ್ನು ಮುಂಬೈನಲ್ಲಿ ಯಾರಿಗಾದರೂ ಹಸ್ತಾಂತರಿಸಿದರು ಮತ್ತು ಕೆಲವು ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಅಪರಾಧದಲ್ಲಿ ಸಹಾಯ ಮಾಡಿದವರನ್ನು ಒಳಗೊಂಡಂತೆ ಇನ್ನೂ ಹೆಚ್ಚಿನ ಬಂಧನಗಳನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.