ಮಂಗಳೂರು, ಅ. 05 (DaijiworldNews/HR): ಚಿಲಿಂಬಿ ಗುಡ್ಡೆಯಲ್ಲಿ ಅನ್ಯಕೋಮಿನ ಜೋಡಿ ಪತ್ತೆಯಾದಾಗ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಪೊಲೀಸರಿಗೆ ಮಾಹಿತಿ ನೀಡಿದ ಬಜರಂಗದಳದ ಕಾರ್ಯಕರ್ತರನ್ನು ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಶ್ಲಾಘಿಸಿದ್ದಾರೆ.
ಚಿಲಿಂಬಿ ಗುಡ್ಡೆಯಲ್ಲಿ ಯುವಕರಿಂದ ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಿಭಾ, ಬಜರಂಗದಳ ಕಾರ್ಯಾಚರಣೆಯನ್ನು ಅಭಿನಂದಿಸುತ್ತೇನೆ. ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮಾದಕ ವಸ್ತು ಸೇವಿಸಿದವರನ್ನು ಬಂಧಿಸಿದ್ದಾರೆ. ಡ್ರಗ್ಸ್ ವಿರುದ್ಧ ನಾವೆಲ್ಲರೂ ಸೇರಿ ಹೋರಾಟ ಮಾಡಬೇಕು" ಎಂದಿದ್ದಾರೆ.
ಇನ್ನು ಅಪ್ರಾಪ್ತ ಬಾಲಕಿಯೊಬ್ಬಳ ತಾಯಿಯ ಅಸಹಾಯಕತೆ ನೋಡಿ ನನಗೆ ಬೇಸರವಾಗಿದೆ. ನನ್ನಿಂದ ಅ ಹುಡುಗಿಯ ತಾಯಿಗೆ ಯಾವ ರೀತಿ ಸಪೋರ್ಟ್ ಬೇಕಾದರೂ ಮಾಡುತ್ತೇನೆ.
ಹುಡುಗಿಯರಿಗೆ ಕೌನ್ಸಿಲಿಂಗ್ ಅವಶ್ಯಕತೆ ಇದೆ ಅದಕ್ಕೆ ವ್ಯವಸ್ಥೆ ಮಾಡುತ್ತೇನೆ. ಹೆಣ್ಣು ಮಕ್ಕಳು ಅದಷ್ಟು ಸೇಫ್ ಆಗಿರಿ" ಎಂದು ಹೇಳಿದ್ದಾರೆ.