ಬಂಟ್ವಾಳ, ಅ 05 (DaijiworldNews/MS): ಇಲ್ಲಿನ ತಾಲೂಕಿನಾದ್ಯಂತ ಅ. 3 ರ ಶನಿವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ಭಾರೀ ಮಳೆ -ವಿಪರೀತ ಗಾಳಿಗೆ ತುತ್ತಾದ ಬಡಗಕಜೆಕಾರು ಪಂಚಾಯತ್ ವ್ಯಾಪ್ತಿಯ ಕಂರ್ಬಡ್ಕ,ಪಾದೆ, ಪರೊಟ್ಟು, ಕೋಮಿನಡ್ಕ, ಪಾದೆಮಣ್ಣು, ಪಿತ್ತಿಲು ಹಾಗೂ ಉಳಿ ಪಂಚಾಯತ್ ವ್ಯಾಪ್ತಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಇಲಾಖಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಅಕ್ರಮ ಸಮಿತಿ ಮಾಜಿ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್ ಉಳಿ ಹಾಗೂ ಬಡಕಜೆಕಾರು ಪಂಚಾಯತ್ ಸದಸ್ಯರು ವಲಯ ಕಾಂಗ್ರೆಸ್ ಅಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು.
ಶನಿವಾರ ಬೀಸಿದ ಬಿರುಗಾಳಿಗೆ ಸುಮಾರು 60 ಎಕ್ರೆ ಪ್ರದೇಶದಲ್ಲಿ ಸಾಕಷ್ಟು ಹಾನಿಯುಂಟು ಮಾಡಿತ್ತು. 100ಕ್ಕೂ ಅಧಿಕ ಅಡಿಕೆ ತೋಟಗಳಲ್ಲಿ ಫಸಲು ಬಿಡುವ ಅಡಿಕೆ ಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿದೆ. ಸುಮಾರು ಎರಡು ಕೋಟಿ ಗೂ ಅಧಿಕ ನಷ್ಟ ಉಂಟಾಗಿದೆ. 25ಕ್ಕೂ ಅಧಿಕ ಮೆಸ್ಕಾಂ ಕಂಬಗಳು ನೆಲಕ್ಕುರುಳಿ ಇಡೀ ಗ್ರಾಮ ಕತ್ತಲಲ್ಲಿತ್ತು.10ಕ್ಕೂ ಅಧಿಕ ವಾಸದ ಮನೆಗಳಿಗೆ ಹಾನಿಯಾಗಿತ್ತು.