ಮಂಗಳೂರು, ಅ. 05 (DaijiworldNews/HR): ಲವ್ ಜಿಹಾದ್, ಮತಾಂತರಗೊಳಿಸುವ ಜಿಹಾದಿಗಳಿಗೆ ಮುಂದಿನ ದಿನಗಳಲ್ಲಿ ದುರ್ಗಾವಾಹಿನಿ ಕಾರ್ಯಕರ್ತೆಯರ ಮುಖಾಂತರ ಏಟು ತಿನ್ನಲ್ಲು ಸಿದ್ದರಾಗಿರಬೇಕು. ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಪ್ರೀತಿಯ ನೆಪದಲ್ಲಿ ಯಾಮಾರಿಸಿ ಮತಾಂತರಿಸುವ ಮುಸ್ಲಿಮ್ ಜಿಹಾದಿಗಳಿಗೆ ಉತ್ತರವಾಗಿ ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಕೂಡಾ ಪ್ರೀತಿಸಿ ಅವರಿಗೆ ತಿಲಕವಿಡುವುದು ಕೂಡಾ ಹಿಂದೂ ಸಮಾಜದವರಿಗೂ ಗೊತ್ತಿದೆ. ಜಿಹಾದಿಗಳ ಲವ್ ಜಿಹಾದ್, ಮತಾಂತರದ ವಿರುದ್ಧ ಹಿಂದೂ ಸಮಾಜದ ಹೋರಾಟ ಎಂದಿಗೂ ನಿಲ್ಲದು ಎಂದು ಚೈತ್ರಾ ಕುಂದಾಪುರ ಎಚ್ಚರಿಸಿದ್ದಾರೆ.
ಬಜರಂಗ ದಳ, ದುರ್ಗಾ ವಾಹಿನಿಯಿಂದ ಸುರತ್ಕಲ್ ನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, "ಬಜರಂಗದಳದ ಕಾರ್ಯಕರ್ತರು ಅಲೆಮಾರಿಗಳು ಮತ್ತು ಪುಡಿ ರೌಡಿಗಳು ಎಂಬ ಟೀಕೆಗಳನ್ನು ನಾವು ಕೇಳುತ್ತಲೇ ಇದ್ದೇವೆ. ಆದರೆ ಸಂಘಟನೆಯ ಕಾರ್ಯಕರ್ತರು ತಮ್ಮ ತಾಯ್ನಾಡಿನ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್ 19 ಸೋಂಕಿನ ಕಷ್ಟದ ಸಮಯದಲ್ಲಿ ಅನೇಕರಿಗೆ ಸಹಾಯ ಮಡಿದ್ದಾರೆ. ಭಜರಂಗದಳದ ಕಾರ್ಯಕರ್ತರು ಎಂದಿಗೂ ಗಾಂಜಾ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ" ಎಂದಿದ್ದಾರೆ.
ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, "ಡ್ರಗ್ಸ್ ಮತ್ತು ಲವ್ ಜಿಹಾದ್, ಧಾರ್ಮಿಕ ಧರ್ಮಾಂಧರ ವಿರುದ್ಧ ನಮ್ಮ ಸಂಘಟನೆಗಳು ಹೋರಾಡುತ್ತವೆ. ವಾಹನಗಳನ್ನು ಅಡ್ಡಗಟ್ಟಿದ ನಂತರ ನಾವು ಎಂದಿಗೂ ನೈತಿಕ ಪೊಲೀಸ್ ಗಿರಿ ಅಥವಾ ಜನರ ಮೇಲೆ ದಾಳಿ ನಡೆಸಲಿಲ್ಲ. ಡ್ರಗ್ಸ್ ಹಾಗೂ ಲವ್ ಜಿಹಾದ್ ಅನ್ನು ಕರಾವಳಿ ಕರ್ನಾಟಕದಿಂದ ದೂರವಿಡಲಾಗಿದೆ" ಎಂದರು.
ತುಳು ಅಕಾಡೆಮಿ ಸದಸ್ಯೆ ಶಾಂತಿ ಶೆಟ್ಟಿ ಮಾತನಡಿ, ಹಿಂದೂ ಸಮಾಜವು ಒಟ್ಟಾಗಿ ಧಾರ್ಮಿಕ ಪರಿವರ್ತನೆ ಮತ್ತು ಲವ್ ಜಿಹಾದ್ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು. ಅನೇಕ ಹಿಂದುಗಳು ತಮ್ಮದೇ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಅವರು ವಿಷಾದಿಸಿದರು.
ಮತಾಂತರ ಮತ್ತು ಲವ್ ಜಿಹಾದ್ ನಿಲ್ಲಿಸುವ ಗುರಿಯನ್ನು ಹೊಂದಿರುವ ಕಾನೂನನ್ನು ಬಲಪಡಿಸಲು ಕೋರಿ ರಾಜ್ಯ ಗೃಹ ಸಚಿವರಿಗೆ ತಿಳಿಸಿದ ಪತ್ರವನ್ನು ಶಾಸಕ ವೈ ಭರತ್ ಶೆಟ್ಟಿ ಮೂಲಕ ಹಸ್ತಾಂತರಿಸಲಾಯಿತು.
ಭಜರಂಗದಳ ವಿಭಾಗೀಯ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಶ್ವೇತಾ, ಮತ್ತು ವಿಶ್ವ ಹಿಂದೂ ಪರಿಷತ್ ಸುರತ್ಕಲ್ ಘಟಕದ ಕಾರ್ಯದರ್ಶಿ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.