ಮಂಗಳೂರು, ಅ 04 (DaijiworldNews/MS): ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ ಅ. 02 ರಂದು ತುಳು ಭವನ ಮಂಗಳೂರು ಇಲ್ಲಿ ಆಹಾರೋತ್ಸವ ಕಾರ್ಯಕ್ರಮ ನಡೆಯಿತು. ಸುಮಾರು 50 ಬಗೆಯ ವಿವಿಧ ರೀತಿಯ ತುಳುನಾಡಿನ ಖಾದ್ಯಗಳನ್ನು ತಯಾರಿಸಲಾಗಿದ್ದು ಗಮನ ಸೆಳೆಯಿತು.
ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಶ್ರೀಮತಿ ಬಾಲಿಕಾ ಪ್ರಶಾಂತ್, ಕಾರ್ಯದರ್ಶಿ ಶ್ರೀಮತಿ ಅಕ್ಷತಾ ಆದರ್ಶ್, ಖಜಾಂಚಿ ಶ್ರೀಮತಿ ವೈಶಾಲಿ ಪಡಿವಾಳ್, ಶ್ರೀಮತಿ ಶ್ರುತ ಜಿತೇಶ್ ಶ್ರೀಮತಿ ಸಹನಾ ಕಿರಣ್ ಸಂಘದ ಸದಸ್ಯರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್ಸಾರ್ ಉಪಸ್ಥಿತರಿದ್ದರು.