ಬಂಟ್ವಾಳ, ಅ.03 (DaijiworldNews/PY): ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪಾಣೆಮಂಗಳೂರು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಆಶ್ರಯದಂತೆ ಗಾಂಧಿ ಜಯಂತಿಯ ಪ್ರಯುಕ್ತ ಕಳ್ಳಿಗೆಯಲ್ಲಿ ನಿರ್ಮಿಸಿದ ಗಾಂಧಿ ಕಟ್ಟೆಯ ಉದ್ಘಾಟನೆ ಮಾಜಿ ಸಚಿವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಪದ್ಮಶೇಖರ್ ಜೈನ್,ಎಂ ಎಸ್ ಮೊಹಮ್ಮದ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮೊಡಂಕಾಪು ಚಾರ್ಜ್ ಧರ್ಮಗುರುಗಳಾದ ಫಾದರ್ ವಲೇರಿಯನ್ ಡಿ'ಸೋಜ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮತ್ತು ಬೇಬಿ ಕುಂದರ್,ಮಾಜಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ, ಜಿಲ್ಲಾ ಸೇವಾದಾಳ ಅಧ್ಯಕ್ಷ ಜೋಕಿಂ ಡಿ'ಸೋಜ,ಮಾಜಿ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್, ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಜಯಂತಿ. ವಿ ಪೂಜಾರಿ, ಶ್ರೀಮತಿ ಲೀನಾ ಮುಂತೇರೋ, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗಂಗಾಧರ್, ಸದಾಶಿವ ಬಂಗೇರ, ಪ್ರಮುಖರಾದ ರೋಷನ್ ರೈ,ಫ್ಲೋಸಿ ಡಿ'ಸೋಜ,ಅಲ್ಬರ್ಟ್ ಮೇನಜಸ್, ಸುದರ್ಶನ್ ಜೈನ್, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.