ಕಾಸರಗೋಡು, ಅ.02 (DaijiworldNews/HR): ರಸ್ತೆಗಡ್ಡವಾಗಿ ಬಂದ ಕಾಡಹಂದಿಗೆ ಬಡಿದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮುಳ್ಳೇರಿಯ ಸಮೀಪದ ಕರ್ಮಂತ್ತೋಡಿಯಲ್ಲಿ ನಡೆದಿದೆ.
ಕರ್ಮತ್ತೋಡಿ ಕಾವುಂಗಾಲ್ನ ಕುಞ೦ಬು ನಾಯರ್ (60) ಮೃತಪಟ್ಟವರು.
ಮುಳ್ಳೇರಿಯ ಪೇಟೆಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಕರ್ಮಂತ್ತೋಡಿಯಲ್ಲಿ ಕಾಡುಹಂದಿಯು ರಸ್ತೆಗಡ್ಡವಾಗಿ ಓಡಿದ್ದು, ಸ್ಕೂಟರ್ ಹಂದಿಗೆ ಬಡಿದಿದೆ. ನಿಯಂತ್ರಣ ತಪ್ಪಿದ ಸ್ಕೂಟರ್ ಮಗುಚಿ ಬಿದ್ದಿದ್ದು, ರಸ್ತೆಗೆಸೆಯಲ್ಪಟ್ಟ ಕುಞ೦ಬು ನಾಯರ್ ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಮುಳ್ಳೇರಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಸ್ಕೂಟರ್ ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಕಾಡ ಹಂದಿ ಕೂಡಾ ಸ್ಥಳದಲ್ಲೇ ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ಅರಣ್ಯ ಪಾಲಕರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.