ಪುತ್ತೂರು, ಅ 02 (DaijiworldNews/MS): ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇರುವ ಮಾಹಿತಿ ದೊರೆತು ಸಾರ್ವಜನಿಕರು ಮನೆಯ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಇಬ್ಬರನ್ನೂ ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದ್ದು ಯುವತಿ ಶುಕ್ರವಾರ ಬಸ್ ತಂಗುದಾಣದಲ್ಲಿ ಕೈ ಕುಯ್ದ್ದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.
ಯುವತಿಯನ್ನು ಕಾಸರಗೋಡಿನ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 18 ವರ್ಷ ದಾಟಿರುವ ಕಾರಣ ಆಕೆಯ ಇಚ್ಚೆಯಂತೆ ವ್ಯವಹರಿಸಲು ನ್ಯಾಯಾಲಯ ಸೂಚಿಸಿತ್ತು.
ಯುವತಿಯೂ ಸಿದ್ದಿಕ್ ಜತೆ ತೆರಳಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದಳು. ಅದರಂತೆ ಯುವತಿಯ ಪ್ರಿಯತಮೆ ಬೆಳ್ಳಾರೆ ಕುಂಟಿಕಾನದ ಅಬೂಬಕರ್ ಸಿದ್ದೀಕ್ ಜತೆ ಕಳುಹಿಸಿಕೊಡಲಾಗಿತ್ತು
ಆದರೆ ಯುವತಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಬಶಿರಡ್ಕ ಬಸ್ ತಂಗುದಾಣದಲ್ಲಿ ಕೈ ಕುಯ್ದುಕೊಂಡು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಪ್ಯ ಪೊಲೀಸರು ಭೇಟಿ ನೀಡಿದ್ದು, ಇದು ಆಕಸ್ಮಿಕವೇ ಅಥವಾ ಆತ್ಮಹತ್ಯೆಯ ಯತ್ನವೇ ಎನ್ನುವ ಬಗ್ಗೆ ವಿಚಾರಣೆ ಬಳಿಕ ತಿಳಿದುಬರಲಿದೆ.