ಪುತ್ತೂರು, ಅ 02 (DaijiworldNews/MS): ಕಡು ಬಡತನದಿಂದಾಗಿ ಗುಡಿಸಲಿನಲ್ಲಿ ದಿನ ಕಳೆಯುತ್ತಿದ್ದ ಪುತ್ತೂರು ತಾಲೂಕಿನ ಇರ್ದೆ ಬೆಟ್ಟಂಪಾಡಿಯ ನಿವಾಸಿ ಉಪ್ಪಳಿಗೆ ಸರಕಾರಿ ಪ್ರೌಢಶಾಲೆ ಇರ್ದೇ ಎಸೆಸೆಲ್ಸಿ ವಿದ್ಯಾರ್ಥಿನಿ ಕುಮಾರಿ ಮೋಕ್ಷಿತ ಕುಟುಂಬಕ್ಕೆ ದಾನಿಗಳ ನೆರವಿನಿಂದ ಹೊಸ ಮನೆ ನಿರ್ಮಾಣಗೊಂಡು ಅ.2 ರ ಇಂದು ಹಸ್ತಾಂತರವಾಗಲಿದೆ.
ಶಿಕ್ಷಾಣಾಧಿಕಾರಿಯವರ ಈ ಕಾರ್ಯಕ್ಕೆ ಹತ್ತಾರು ದಾನಿಗಳು ಸಹಕಾರ ನೀಡಿದ್ದು ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಶಂಕುಸ್ಫಾಪನೆಗೊಂಡ ಮನೆ ಗಾಂಧಿ ಜಯಂತಿಯಂದು ಪೂರ್ಣಗೊಂಡು ಗೃಹಪ್ರವೇಶಕ್ಕೆ ಅಣಿಯಾಗಿದೆ.
ಮಗುವಿನ ಪೋಷಕರಿಗೆ ಮನೆಯನ್ನು ಸ್ಥಳೀಯ ಶಾಸಕರಾದ ಸಂಜೀವ ಮಠಂದೂರು ಅವರ ಹಿರಿತನದಲ್ಲಿ ಶಿಕ್ಷಣ ಇಲಾಖೆಯ ಬಿ ಇ ಓ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಸರಕಾರಿ ಶಾಲೆಯ ಮುಖ್ಯಗುರುಗಳು ಮತ್ತು ಸಿಬ್ಬಂದಿ ವರ್ಗದ ಮುತುವರ್ಜಿಯೊಂದಿಗೆ ಮಗುವಿನ ಪಾಲಕರಿಗೆ ಮನೆ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರಲಿದೆ.