ವಿಟ್ಲ, ಅ 01 (DaijiworldNews/MS): ಕೊಳ್ನಾಡುವಿನ ಕೆ.ಪಿ. ಬೈಲು ನಾರ್ಶ ನಿವಾಸಿಯನ್ನು ಅಪರಿಚಿತರ ತಂಡಯೊಂದು ಅಪಹರಣ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮೀನಿನ ವ್ಯಾಪಾರಿಯಾಗಿದ್ದ ನಾರ್ಶ ನಿವಾಸಿ ಮುಹಮ್ಮದ್ ಅನ್ಸಾರ್ (34) ಅಪಹರಣಗೊಳಗಾದ ವ್ಯಕ್ತಿಯಾಗಿದ್ದು ಇವರ ಪತ್ನಿ ಅಪ್ಸ ಎಂಬವರು ದೂರು ನೀಡಿದ್ದಾರೆ.
ಅನ್ಸಾರ್ ಮೀನಿನ ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನಲೆಯಲ್ಲಿ ಬೇರೆ ವ್ಯವಹಾರ ಮಾಡುತ್ತೇನೆ ಎಂದು 2 ತಿಂಗಳ ಹಿಂದೆ ಕೇರಳಕ್ಕೆ ಹೋಗಿ ಆ ಬಳಿಕ ಮನೆಗೆ ಹಿಂದಿರುಗಿದ್ದರು. ಈ ನಡುವೆ ತಾನು ಮನೆಯಲ್ಲಿ ಇಲ್ಲದ ವೇಳೆ ಪತ್ರಿ ಮುಹಮ್ಮದ್ ಅನ್ಸಾರ್ ಅವರನ್ನು ಅಪರಿಚಿತರ ತಂಡ ಬಲವಂತವಾಗಿ ಕರೆದುಕೊಂಡು ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಿಕೊಂಡು ಹೋಗಲಾಗಿದೆ ಎಂದು ಅಪ್ಸ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.