ಕಾರ್ಕಳ, ಸೆ. 30 (DaijiworldNews/SM): ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ವ್ಯಾಪ್ತಿಯ ಗ್ಯಾರೇಜ್ ಮಾಲಕರ ಸಭೆ ಹಾಗೂ ಜಾನುವಾರು ಕಳ್ಳರ ಪೆರೇಡ್ ನಡೆಯಿತು.
ವಾಹನಗಳ ನಂಬ್ರ ಪ್ಲೇಟ್ ಬದಲಾವಣೆ, ಅಪಘಾತಕ್ಕೊಳಗಾದ ವಾಹನಗಳ ದುರಸ್ತಿ, ವಾಹನಗಳ ಪೈಟಿಂಗ್ ಸಂದರ್ಭದಲ್ಲಿ ಅನುಮಾನ ಬಂದಾಗ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ತಿಳಿಸದರು. ಅದಕ್ಕೆ ಗ್ಯಾರೇಜ್ ಮಾಲಕರು ಸಕರಾತ್ಮಕ ಸ್ಪಂದನೆ ನೀಡಿದರು.
ಜಾನುವಾರು ಕಳವು ಹತ್ಯೆ ಕೃತ್ಯದಲ್ಲಿ ಭಾಗಿಯಾಗಿದ್ದವರ ಪೆರೇಡ್ ಕಾರ್ಯವು ಇದೇ ಸಂದರ್ಭದಲ್ಲಿ ನಡೆಯಿತು.
ಕೃತ್ಯಕ್ಕೆ ತಿಲಾಂಜಲಿ ನೀಡಬೇಕು. ಕಾನೂನು ಉಲ್ಲಂಘನೆ ನಡೆಸಿದಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವುದೆಂದು ಇದೇ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಕಟ್ಟೆಚ್ಚರ ನೀಡಿದರು.
ನಗರ ಠಾಣಾಧಿಕಾರಿ ಮಧು ಬಿ. ಇ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಮೊದಲಾದವರು ಉಪಸ್ಥಿತರಿದ್ದರು.