ಕಾರ್ಕಳ, ಸೆ 29 (DaijiworldNews/MS): ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದ ಗುರುದತ್ತಪೀಠದ ಪೂಜಾಕೈಂಕರ್ಮ ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ಕುರಿತು ಹೈಕೋರ್ಟ್ ನೀಡಿದ ಮಹತ್ವದತೀರ್ಪಿಗೆ ಕಾರ್ಕಳ ಭಾರತೀಯಜನತಾ ಪಕ್ಷ ಸಂತಸ ವ್ಯಕ್ತಪಡಿಸಿದೆ.
ನೂರಾರು ವರ್ಷಗಳಿಂದ ಪೂಜಿಸಿ ಬಂದಿರುವ ಹಿಂದೂಗಳ ನಂಬಿಕೆಯ ಧಾರ್ಮಿಕ ಶ್ರದ್ದಾಕೇಂದ್ರವನ್ನು ಈ ಹಿಂದೆಕಾಂಗ್ರೇಸ್ ಸರಕಾರ ಕೇವಲ ಮತ ಬ್ಯಾಂಕ್ಗಾಗಿ ಅಲ್ಲಿಯ ಪೂಜಾಕೈಂಕರ್ಮವನ್ನು ಮುಜಾವರ್ಗೆ ವಹಿಸುವ ಮೂಲಕ ಹಿಂದೂ ಸಮಾಜದ ಲಕ್ಷಾಂತರದತ್ತಪೀಠ ಹೋರಾಟಗಾರರ ಕೆಂಗ್ಗಣಿಗೆ ಗುರಿಯಾಗಿತ್ತು.
ನಂಜನಗೂಡಿನ ದೇವಾಸ್ಧಾನದ ವಿಷಯದಲ್ಲಿ ಪ್ರತಿಭಟನೆಗೆ ಜೈ ಎಂದವರು ದತ್ತ ಪೀಠದ ಹೈಕೋಟ್ ತೀರ್ಪಿಗೆ ಜೈ ಎನ್ನಲೆಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿ ಸರಕಾರ ಹಿಂದೂ ಸಂಘಟನೆಗಳ ಸಲಹೆಯೊಂದಿಗೆ ಪ್ರಕರಣವನ್ನು ಹೊಸದಾಗಿ ಕಾನೂನು ರೀತ್ಯಾ ಪರಿಶೀಲಿಸಿ ಎರಡೂ ಕಡೆಯವರ ಅಹವಾಲು ಆಲಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ ಬೆಳವಣಿಗೆ ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿ ಮಂಡಲ ವಕ್ತಾರ ಹರೀಶ್ ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.