ಮಂಗಳೂರು, ಸೆ 29 (DaijiworldNews/MS): ವಿಪಕ್ಷ ನಾಯಕ ಸಿದ್ದರಾಮಯ್ಯ ಬಹುದೊಡ್ಡ ಭಯೋತ್ಪಾದಕ ಎಂದು ನನಗನಿಸುತ್ತದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗೆ ನಳಿನ್ ಅವರು ಪ್ರತ್ರಿಕ್ರಿಯಿಸಿ , " ಸಿದ್ದರಾಮಯ್ಯರದ್ದು ತಾಲಿಬಾನ್ ಸಂಸ್ಕೃತಿ. ಅವರೊಬ್ಬ ದೊಡ್ಡ ಭಯೋತ್ಪಾದಕ ಎಂದು ಅನಿಸುತ್ತಿದೆ. ಅವರ ಕಾಲಘಟ್ಟದಲ್ಲೇ ಅತೀ ಹೆಚ್ಚು ಹಿಂದುಗಳ ಹತ್ಯೆ ಆಗಿರುವುದು. ಕೊಲೆ, ಸುಲಿಗೆ, ಗೋಹತ್ಯೆ ಅವರ ಕಾಲದಲ್ಲೇ ಹೆಚ್ಚು ನಡೆದಿರುವಾಗ ಅವರಿಗೆ ನಮ್ಮ ಬಗ್ಗೆ ಕೇಳುವುದಕ್ಕೆ ನೈತಿಕತೆ ಎಲ್ಲಿದೆ" ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
"ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ 24 ಹಿಂದೂ ಯುವಕರನ್ನು ಹತ್ಯೆ ಮಾಡಲಾಗಿತ್ತು. ಕರಾವಳಿಯಲ್ಲಿ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ಮಡಿಕೇರಿ ಕುಟ್ಟಪ್ಪ, ದೀಪಕ್ ರಾವ್ ಸೇರಿದಂತೆ ಅನೇಕರನ್ನು ಕೊಲೆಗೈಯಲಾಗಿತ್ತು" ಎಂದು ಆರೋಪಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, "ಸಿದ್ದರಾಮಯ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ ಕೂಡಾ ಮುಳುಗಿದ ಹಡಗು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಿಶ್ವಾಸ ಜನರಿಗಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಹತ್ತಾರು ಜನ ಬಿಜೆಪಿ ಸೇರಲು ಸಿದ್ದತೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.