ಮಂಗಳೂರು, ಸೆ.29 (DaijiworldNews/PY): ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡೆ ಲಾವಣ್ಯ ಬಳ್ಳಾಲ್ ನೇರ ಸವಾಲೆಸಿದಿದ್ದಾರೆ.
"ದ.ಕ. ಹಾಗೂ ಉಡುಪಿಯಲ್ಲಿಇರುವುದು ತಾಲಿಬಾನ್ ಸರ್ಕಾರ ಅಥವಾ ಬಿಜೆಪಿ ಸರ್ಕಾರವಾ? ಯಾವ ಕಾನೂನಿನ ಕಾಯ್ದೆಯಡಿಯಲ್ಲಿ ಬಜರಂಗದಳಕ್ಕೆ ಹಲ್ಲೆ ನಡೆಸಲು ಹಕ್ಕಿದೆ? ಪುಡಿ ರೌಡಿಗಳಿಗೆ ಮಕ್ಕಳ ಮೇಲೆ ಹಲ್ಲೆ ನಡೆಸುವಂತ ಅಧಿಕಾರ ಎಲ್ಲಿಂದ ಬಂತು? ಬೇರೆಯವರ ಮನೆ ಮಕ್ಕಳಿಗೆ ಬುದ್ಧಿ ಹೇಳುವುದಕ್ಕೆ ಇವರ್ಯಾರು?" ಎಂದು ಪ್ರಶ್ನಿಸಿದ್ದಾರೆ.
"ಡಿ ವಿ ಸದಾನಂದ ಗೌಡರ ವಿಡಿಯೋ ಬಂದ ಸಂದರ್ಭ ಬಜರಂಗದಳ ಎಲ್ಲಿತ್ತು? ಕೊರೊನಾ ಸಂದರ್ಭದಲ್ಲೂ ಕೂಡಾ ಏಕೆ ಇವರು ಸಹಾಯ ಮಾಡಿಲ್ಲ?" ಎಂದು ರಾಜ್ಯ ಸರ್ಕಾರ ಹಾಗೂ ಬಜರಂಗದಳಕ್ಕೆ ನೇರ ಸವಾಲು ಹಾಕಿದ್ದಾರೆ.