ಮಂಗಳೂರು, ಸೆ 28 (DaijiworldNews/MS): ಯಾಂತ್ರಿಕೃತ ಮೀನುಗಾರಿಕೆಗೆ ತೆರಳುವ ಬೋಟುಗಳಲ್ಲಿ ದ್ವಿಮುಖ ಸಂವಹನ ಸಂಪರ್ಕ ಸಾಧನಕ್ಕೆಅಗತ್ಯವಿರುವ ಬ್ಯಾಟರಿಯನ್ನು ಸೋಲಾರ್ ಮೂಲಕ ರಿಚಾರ್ಜ್ ಮಾಡಿಕೊಳ್ಳುವ ಸಾಧ್ಯತೆಗಳ ಕುರಿತು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದಎಸ್. ಅಂಗಾರ ಅವರು ತಿಳಿಸಿದರು.
ಅವರು ಸೆ.27ರ ಸೋಮವಾರ ನಗರದ ಜಿಲ್ಲಾಧಿಕಾರಿಯವರಕಚೇರಿ ಸಭಾಂಗಣದಲ್ಲಿ ಮೀನುಗಾರಿಕಾ ಬೋಟ್ಗಳಲ್ಲಿ ಸಂಪರ್ಕ ಸಾಧನಗಳನ್ನು ಅಳವಡಿಸುವ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀನುಗಾರರ ಸುರಕ್ಷೆ ಸರಕಾರದ ಆದ್ಯತೆ. ಸಮುದ್ರದ ಬಹುದೂರ ಹೋಗಿ ಮೀನುಗಾರಿಕೆ ಮಾಡುವವರ ಬೋಟುಗಳ ಸ್ಥಿತಿಗತಿಗಳನ್ನು ಅವಲೋಕಿಸಲು ಹಾಗೂ ಮೀನುಗಾರರ ಸುರಕ್ಷತಾದೃಷ್ಟಿಯಿಂದ ದ್ವಿಮುಖ ಸಂವಹನ ಸಂಪರ್ಕ ಸಾಧನವನ್ನು ಕಡ್ಡಾಯಗೊಳಿಸಲಾಗಿದೆ.ಆದರೆ ಈ ಸಾಧನದಲ್ಲಿರುವ ಬ್ಯಾಟರಿಗಳ ಚಾರ್ಜ್ಖಾಲಿಯಾದಲ್ಲಿ ಬೋಟುಗಳಲ್ಲಿಯೇ ಸೋಲಾರ್ ಮೂಲಕ ಅವುಗಳನ್ನು ರಿಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗುವಂತಹ ಯತ್ನಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದುಎಂದರು.
ಉಪ್ಪು ನೀರಿನಲ್ಲಿ ಸೋಲಾರ್ ಪ್ಯಾನಲ್ಗಳು ಸೂಕ್ತವಾಗಿ ಕಾರ್ಯನಿರ್ವಹಿಸುವುದಿಲ್ಲ ಹಾಗೂ ಬಾಳಿಕೆಯೂ ಬರುವುದಿಲ್ಲ ಹಾಗಾಗಿ ಪರ್ಯಾಯ ಕ್ರಮಗಳನ್ನು ಪತ್ತೆ ಮಾಡಲುಚಿಂತಿಸಲಾಗಿದೆ, ಬೋಟ್ಗಳ ಮೇಲೆಯೆಕವಚದಂತಹ ಸೋಲಾರ್ ಫಲಕಗಳನ್ನು ಅಳವಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದುಎಂದುಅವರು ಹೇಳಿದರು. ಅಲ್ಲದೇ ಈ ಸಾಧನಗಳಲ್ಲಿರುವ ಕಂಡುಬಂದಿರುವ ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಲುತಜ್ಞರ ಸಮಿತಿಯೊಂದನ್ನು ರಚಿಸಿಕೊಂಡು, ಅವುಗಳಲ್ಲಿನ ಸಮಸ್ಯೆಗಳನ್ನು ಬಗೆ ಹರಿಸಿಕೊಂಡು ಮೀನುಗಾರ ಸ್ನೇಹಿಯನ್ನಾಗಿಸಲಾಗುವುದುಎಂದು ಸಚಿವರು ತಿಳಿಸಿದರು.
ಸ್ಕೈಲೋಅಥವಾಇಸ್ರೋ ಆಗಲಿ ಯಾವುದೇ ಸಂಸ್ಥೆ ತಯಾರಿಸಿದ ದ್ವಿಮುಖ ಸಂವಹನ ಸಂಪರ್ಕ ಸಾಧನಕ್ಕೆಗ್ಯಾರಂಟಿಇರಬೇಕು, ಆ ಯಂತ್ರದ ಸರ್ವಿಸ್ ಮಾಡಿಕೊಡುವ ಬಗ್ಗೆಯೂಖಚಿತತೆಇರಬೇಕುಎಂದ ಸಚಿವರು, ಅದರಂತೆ ಮೀನುಗಾರರಿಗೆ ಇದೀಗ 1.12 ಲಕ್ಷಕೆ.ಎಲ್. ಡೀಸೆಲ್ ಸಬ್ಸಿಡಿ ಈಗಾಗಲೇ ನೀಡಲಾಗುತ್ತಿದೆ, ಅದನ್ನು1.50 ಲಕ್ಷಕೆ.ಎಲ್ಗೆ ವಿಸ್ತರಿಸುವಕುರಿತು ಮುಖ್ಯಮಂತ್ರಿಗಳೊಂದಿಗೆ ಗುರುವಾರಚರ್ಚಿಸಲಾಗುವುದುಎಂದವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಡಾ.ರಾಜೇಂದ್ರ ಕೆ.ವಿ. ಅವರು ಮಾತನಾಡಿ, ದ್ವಿಮುಖ ಸಂವಹನ ಸಂಪರ್ಕ ಸಾಧನದಲ್ಲಿಕಂಡುಬಂದಿರುವ ದೋಷಗಳನ್ನು ಸರಿಪಡಿಸಲುತಾಂತ್ರಿಕ ನಿಪುಣರ ಸಮಿತಿಯೊಂದನ್ನು ರಚಿಸಿ, ಆ ಸಮಿತಿಯು ಸಾಧಕ-ಬಾಧಕಗಳನ್ನು ಅರಿತು ಸಮಿತಿ ನೀಡುವ ಸಲಹೆಗಳ ಆಧಾರದಲ್ಲಿ ಸಾಧನದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಮೀನುಗಾರಿಕಾಇಲಾಖೆಯ ನಿರ್ದೇಶಕರ ಮೂಲಕ ಅದನ್ನು ಫಲಾನುಭವಿಗಳಿಗೆ ಒದಗಿಸಲಾಗುವುದುಎಂದು ಹೇಳಿದರು.
ಶಾಸಕರಾದ ವೇದವ್ಯಾಸಕಾಮತ್, ಉಡುಪಿ ಶಾಸಕ ರಘುಪತಿ ಭಟ್, ಕರ್ನಾಟಕ ಮೀನುಗಾರಿಕಾಅಭಿವೃದ್ದಿ ನಿಗಮದಅಧ್ಯಕ್ಷ ನಿತೀನ್ಕುಮಾರ್, ಕರಾವಳಿ ಕಾವಲು ಪಡೆಯಡಿಐಜಿ ವೆಂಕಟೇಶ್, ಮೀನುಗಾರಿಕಾಇಲಾಖೆಯ ನಿರ್ದೇಶಕರಾಮಾಚಾರ್ಯ, ಮೀನುಗಾರಿಕೆಇಲಾಖೆಯಜಂಟಿ ನಿರ್ದೇಶಕ ಹರೀಶ್ಕುಮಾರ್, ಉಡುಪಿ ಜಿಲ್ಲೆಯಜಂಟಿ ನಿರ್ದೇಶಕಗಣೇಶ್, ಮಲ್ಪೆ ಮೀನುಗಾರರ ಸಂಘ, ಟ್ರಾಲ್ಬೋಟ್, ಪರ್ಸಿನ್ ಬೋಟ್ ಮೀನುಗಾರರ ಸಂಘ, ಆಳ ಸಮುದ್ರ ಮೀನುಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿದ್ದರು.