ಕಾರ್ಕಳ, ಸೆ.27 (DaijiworldNews/HR): ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಪಕ್ಷದ ಬಲವರ್ಧನೆಗಾಗಿ ಸಭೆ ಆಯೋಜನೆಗೊಳಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರ ಸಂಪರ್ಕ ಪಕ್ಷದ ಮುಖಂಡನಿಗೆ ಇರಬೇಕು. ಆ ಮೂಲಕ ಪ್ರತಿಯೊಂದು ಗ್ರಾಮ ಪಂಚಾಯತ್ನಿಂದ ಹಿಡಿದು ಲೋಕಸಭಾ ಕ್ಷೇತ್ರದ ವರೆಗೆ ಪ್ರತಿಯೊಂದು ಹಂತದಲ್ಲಿ ಬಿಜೆಪಿ ಜಯಭೇರಿಯಾಗಲು ಸಾಧ್ಯವಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಮುರತ್ತಂಗಡಿ ರಿಜೆನ್ಸಿ ಹಾಲ್ನಲ್ಲಿ ಸೋಮವಾರದಂದು ಬಿಜೆಪಿ ನಿಟ್ಟೆ ಮಹಾಶಕ್ತಿ ಕೇಂದ್ರ ಆಯೋಜಿಸಿದ ವಿಶೇಷ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, "ಸ್ವಚ್ಚತೆ ಹಾಗೂ ಭ್ರಷ್ಟಾಚಾರ ಮುಕ್ತ ಭಾರತದ ಕಲ್ಪನೆ ನೀಡಿದವರು ಮಹಾತ್ಮಗಾಂಧಿಯವರು. ಅವರ ಕನಸ್ಸು ಸಕಾರಗೊಳ್ಳಬೇಕಾದರೆ ಪ್ರತಿಯೊಬ್ಬ ಭಾರತೀಯನು ಅಕ್ಟೋಬರ್ 2ರಂದು ಗಾಂಧಿಜಯಂತಿಯ ದಿನದಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು" ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಮಿಯಾರು ಗ್ರಾಮ ಪಂಚಾಯತ್ನ ಕಾಂಗ್ರೆಸ್ ಬೆಂಬಲಿತ ಸದಸ್ಯ ದಿನೇಶ್ ನಲ್ಕೆ, ಪಕ್ಷೇತರ ಸದಸ್ಯರುಗಳಾದ ಪ್ರಶಾಂತ್ ಪೂಜಾರಿ, ಗಣೇಶ್ ಬಿಜೆಪಿ ಸೇರ್ಪಡೆಗೊಂಡರು. ಇವರಿಗೆ ಸಚಿವ ವಿ.ಸುನೀಲ್ ಕುಮಾರ್ ಹಾಗೂ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಮಿಯ್ಯಾರು, ರೆಂಜಾಳ, ಸಾಣೂರು, ಇರ್ವತ್ತೂರು ನಿಟ್ಟೆ ಗ್ರಾಮ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, 5ಗ್ರಾಮ ಪಂಚಾಯತ್ನ 71 ಪಂಚಾಯತ್ ಸದಸ್ಯರು, 29 ಬೂತ್ ಸಮಿತಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ, ಮಹಿಳಾ ಮೋರ್ಚಾ ಶಕ್ತಿ ಕೇಂದ್ರ ಸಮಿತಿಯವರು ಸಭೆಯಲ್ಲಿ ಭಾಗವಹಿಸಿದ್ದರು.
ನಿಟ್ಟೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕರುಣಾಕರ್ ಎಸ್ ಕೋಟ್ಯಾನ್ ಅದ್ಯಕ್ಷತೆವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಲಿಪ, ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್ ರೆಂಜಾಳ, ಚಂದ್ರಶೇಖರ್ ಇರ್ವತ್ತೂರು, ಕಾರ್ಯದರ್ಶಿ ಧನ್ಶೇಖರ್, ಸತೀಶ್ ಶೆಟ್ಟಿ, ಯುವರಾಜ್ ಜೈನ್, ಬಾಲಕೃಷ್ಣ ಹೆಗ್ಡೆ,ರಮೇಶ್ ಶೆಟ್ಟಿ, ಪ್ರಶಾಂತ್, ಜಯಕರ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.