ಮಂಜೇಶ್ವರ, ಸೆ.26 (DaijiworldNews/HR): ಕಾರು-ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನೀರ್ಚಾಲು ಕಡಂಬಳ ನಿವಾಸಿಯೋರ್ವ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಕಡಂಬಳದ ಝಕಾರಿಯಾ (32) ಎಂದು ಗುರುತಿಸಲಾಗಿದೆ.
ಸೆ. 21 ರಂದು ಕುಂಜತ್ತೂರಿನಲ್ಲಿರುವ ಪತ್ನಿ ಮನೆಯಿಂದ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಮಂಜೇಶ್ವರ ಸಮೀಪ ಅಪಘಾತ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಕೆಲ ದಿನಗಳ ಚಿಕಿತ್ಸೆ ಬಳಿಕ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.