ಕಾಸರಗೋಡು, ಸೆ.26 (DaijiworldNews/HR): ಪೈಂಟಿಂಗ್ ಕಾರ್ಮಿಕರೋರ್ವರು ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಂದ್ರಗಿರಿ ಹೊಳೆಯ ತಳಂಗರೆಯಲ್ಲಿ ನಡೆದಿದೆ.
ಮಾಯಿಪ್ಪಾಡಿ ಯ ವಿಶ್ವನಾಥ (47) ಮೃತಪಟ್ಟವರು.
ಎರಡು ದಿನಗಳ ಹಿಂದೆ ಪೈಂಟಿಂಗ್ ಮನೆಯಿಂದ ತೆರಳಿದ್ದು, ಈ ನಡುವೆ ಭಾನುವಾರ ಚಂದ್ರಗಿರಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.