ಉಡುಪಿ, ಸೆ.26 (DaijiworldNews/PY): ಕರಾವಳಿಯಾದ್ಯಂತ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಪರಿಕರಗಳಿಗೆ ಹೆಸರುವಾಸಿಯಾಗಿರುವ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ನ ಅಂಗಸಂಸ್ಥೆಯಾಗಿ ಮೆಡಿಕೇರ್ ಕ್ಲಿನಿಕಲ್ ಮತ್ತು ಡಯಾಗ್ನೊಸ್ಟಿಕ್ ಲ್ಯಾಬ್ ಮತ್ತು ಮೆಡಿಕೇರ್ ಮೆಡಿಕಲ್ಸ್ ಭಾನುವಾರ ಕೋರ್ಟ್ ರೋಡ್ ಸಮೀಪ ಇರುವ ಮೆಡಿಕಲ್ ಸೆಂಟರ್ನಲ್ಲಿ ಶುಭಾರಂಭಗೊಂಡಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಅವರು ಮೆಡಿಕೇರ್ ಮೆಡಿಕಲ್ಸ್ ಅನ್ನು ಉದ್ಘಾಟಿಸಿದರೆ, ಉದ್ಯಮಿ ಉದಯ್ ಕುಮಾರ್ ಶೆಟ್ಟಿ ಅವರು ಮೆಡಿಕೇರ್ ಕ್ಲಿನಿಕಲ್ ಮತ್ತು ಡಯಾಗ್ನೊಸ್ಟಿಕ್ ಲ್ಯಾಬ್ ಅನ್ನು ಉದ್ಘಾಟನೆ ಮಾಡಿದರು.
ಸಭಾ ಕಾರ್ಯಕ್ರಮವನ್ನು ಮೂಳೆ ತಜ್ಞ ಡಾ ರವೀಂದ್ರನಾಥ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, "ಈಗಾಗಲೇ ಗಿರಿಜಾ ಮನೆಮಾತಾಗಿದೆ. ರಾಜ್ಯದೆಲ್ಲೆಡೆ ಇನ್ನಷ್ಟು ಶಾಖೆಗಳನ್ನು ತೆರೆದು ಅಭಿವೃದ್ಧಿ ಕಾಣುವಂತಾಗಲಿ" ಎಂದರು.
ಕರಾವಳಿಯಯ ಖ್ಯಾತ ಮನೋವೈದ್ಯ ಡಾ. ಪಿ ವಿ ಭಂಡಾರಿ ಅವರು ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ನ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದ್ದು, "ರವಿಯವರ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಕೆಲವು ಮಂದಿ ತಾವು ಯಶಸ್ವಿ ಹೊಂದಿದ ಮೇಲೆ, ಹಿಂದಿನ ಕೆಲಸವನ್ನು ನಿಲ್ಲಿಸಿ ಬಿಡುತ್ತಾರೆ. ಆದರೆ ರವಿಯವರು ಇಂದಿಗೂ ಅದೇ ರೀತಿಯ ಸಾಮಾಜಿಕ ಕಳಕಳಿ ಇಟ್ಟುಕೊಂಡು, ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ತಮ್ಮ ವ್ಯವಹಾರದ ಸ್ವಲ್ಪ ಪಾಲನ್ನು ಸಮಾಜ ಸೇವೆಗಾಗಿ ಮೀಸಲಿಡುತ್ತಿದ್ದಾರೆ. ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ" ಎಂದು ಶುಭ ಹಾರೈಸಿದರು.
"ಶಿಕ್ಷಣ, ಆರೋಗ್ಯದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಗೆ, ಗಿರಿಜಾ ಸಂಸ್ಥೆಯಿಂದ ಇನ್ನಷ್ಟು ಸೇವೆ ಸಿಗಲಿ" ಎಂದು ಯಶ್ಪಾಲ್ ಸುವರ್ಣ ಹಾರೈಸಿದರು.
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, "ಬದುಕು ಪರಿಷ್ಕಾರವಾಗುತ್ತ ಹೋಗಬೇಕು. ದೃಷ್ಟಿ ಬದಲಾದರೇ ದೃಶ್ಯ ಬದಲಾಗುತ್ತದೆ ಎಂಬ ಹಿರಿಯರ ಮಾತಿದೆ. ಹೀಗೆ ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಹೊಂದಲಿ" ಎಂದು ಆಶಿಸಿದರು.
ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ನ ಮಾಲಕ ರವೀಂದ್ರ ಕೆ ಶೆಟ್ಟಿ, ಹರೀಶ್ ಕುಮಾರ್, ಮಕ್ಕಳ ತಜ್ಞ ಡಾ ಅಶೋಕ್ ಕುಮಾರ್, ಹೇಮಾ ಅಶೋಕ್ ರಾಜ್ ಕುಕ್ಕಿಕಟ್ಟೆ, ನ್ಯಾಯವಾದಿ ಶ್ರೀನಿವಾಸ್ ಹೆಗ್ಡೆ, ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿ ಉದಯ್ ಕುಮಾರ್ ಶೆಟ್ಟಿ , ಸಾಯಿರಾಧ ಡೆವಲಪರ್ಸ್ನ ನಿರ್ದೇಶಕ ಮನೋಹರ್ ಶೆಟ್ಟಿ, ದಿವಾಕರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.