ಉಳ್ಳಾಲ, ಸೆ.26 (DaijiworldNews/HR): ಸೇವೆಯ ಮೂಲಕ ಸಮಾಜದ ಅಭ್ಯುದಯಕ್ಕೆ ಒಂದು ಸಂಘಟನೆ. ಸೇವೆಯ ಆರಂಭದದಿಂದಲೇ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮಾಜದ ಅವಕಾಶಗಳನ್ನು ಪೂರೈಸಲು ಸಂಘಟನೆ ಶ್ರಮಿಸಲಿ ಎಂದುಮರಾಣಿಪುರ ಮೇರಿ ಚರ್ಚ್ನ ಧರ್ಮಗುರು ಜಯಪ್ರಕಾಶ್ ಡಿಸೋಜ ಹೇಳಿದ್ದಾರೆ.
ಈ ಕುರಿತು ಮುನ್ನೂರು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ವೆಲ್ಫೇರ್ ಅಸೋಸಿಯೇಷನ್ ರಾಣಿಪುರ ಇದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಎಲ್ಲರ ಜತೆಗೆ ಸಕ್ರಿಯವಾಗಿರಲು ಸಂಘಟನೆ ಶ್ರಮಿಸಲಿ. ಎಲ್ಲಾ ಸದಸ್ಯರು ಏಕಮನಸ್ಸಿನಿಂದ ಪರಿಸರದಲ್ಲಿ ಜ್ಯೋತಿಯಾಗಿ ಸಂಘಟನೆ ಬೆಳೆದು , ಹಲವು ಮಂದಿಗೆ ಸೇವೆ ನಡೆಸುವಂತಾಗಲಿ ಎಂದು ಹಾರೈಸಿದರು.
ಸಂಘಟನೆಯ ಲೋಗೊ ಬಿಡುಗಡೆಗೊಳಿಸಿದ , ರಾಣಿಪುರ ಋಷಿವನ ಸಂಸ್ಥೆಯ ನಿರ್ದೇಶಕ ವಿಲ್ಫ್ರೆಡ್ ರಾಡ್ರಿಗಸ್ ಮಾತನಾಡಿ ,ಸಂತೋಷದ ಯುದ್ಧ ಆರಂಭವಾಗಿದೆ. ಸೇವೆಯ ಮುಖಾಂತರ ಸಮಾಜದ ಏಳಿಗೆಯ ಯುದ್ಧ ಇದಾಗಿದೆ. ಹಳ್ಳಿ ಜನರ ಮನಸ್ಸು ವಿಶಾಲವಾದುದು. ಕೆಥೋಲಿಕರು ಸಾರ್ವತ್ರಿಕ ವಿಶಾಲ ಹೃದಯದವರು. ಕೋವಿಡ್ ಬರಲಿ ಡೇವಿಡ್ ಬರಲಿ ಸಮಾಜದ ಏಳಿಗೆಗಾಗಿ ದುಡಿದ ವಿಶಾಲ ಹೃದಯದವರು. 2008 ರಲ್ಲಿ ಕೋಮುಶಕ್ತಿಗಳು ದಾಳಿ ನಡೆಸಿದಾಗಲೂ, ರಾಣಿಪುರದ ಯುವಕರು ಒಗ್ಗಟ್ಟಾಗಿದ್ದವರು ಎಂದರು.
ರಾಣಿಪುರ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಮೀನಾ ಸಂಘಟನೆಯ ಸಾಮಾಜಿಕ ಜಾಲತಾಣಗಳನ್ನು ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಸಂಘಟನೆ ಉಪಾಧ್ಯಕ್ಷ ಎರಾಲ್ಡ್ ಲೋಬೊ, ಕಾರ್ಯದರ್ಶಿ ರೊನಾಲ್ಡ್ ಕುವೆಲ್ಹೋ, ಪ್ರವೀಣ್ ಡಿಸೋಜ, ಟೈಟಸ್ ಡಿಸೋಜ ಉಪಸ್ಥಿತರಿದ್ದರು.
ಈ ಸಂದರ್ಭ ಕಿಡ್ನಿ ಶಸ್ತ್ರಚಿಕಿತ್ಸೆ ಗೆ ಒಳಪಟ್ಟಿರುವ ಸ್ವೀಟಿ ಮೆಲ್ವಿಟಾ ಡಿಸೋಜ ಇವರಿಗೆ ರೂ. 50,000 ಸಹಾಯಧನವನ್ನು ಸಂಘಟನೆ ವತಿಯಿಂದ ಘೋಷಣೆ ಮಾಡಲಾಯಿತು.
ಸಂಘಟನೆ ಸೇವಾ ಕಾರ್ಯಗಳಿಗೆ ಮೇರಿ ಡಿಸೋಜ ಇವರು ರೂ. 1 ಲಕ್ಷ ಧನವನ್ನು ಹಸ್ತಾಂತರಿಸಿದರು.
ಸಂಘಟನೆಯ ಎಮರ್ಜೆನ್ಸಿ ಆಕ್ಟಿಂಗ್ ಟೀಂ ನ ನೇತೃತ್ವವನ್ನು ಎರಾಲ್ಟ್ ಅಲ್ಬುಕಕ್೯, ನವೀನ್ ಡಿಸೋಜ ಹಾಗೂ ವಿಲ್ಫ್ರೆಡ್ ಡಿಸೋಜ ವಹಿಸಿದ್ದಾರೆ.