ಕಾರ್ಕಳ, ಸೆ.26 (DaijiworldNews/PY): ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ 20 ದಿನಗಳ ಸೇವೆ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮದ ಭಾಗವಾಗಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆಯನ್ನು ಕಾರ್ಕಳ ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಸೆಪ್ಟಂಬರ್ 25ರಂದು ನೇರವೇರಿತು.
ಮಂಡಲ ಅಧ್ಯಕ್ಷ ಮಹಾವೀರ ಹೆಗ್ಡೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೆಪ್ಟಂಬರ್ 25ರ ಶನಿವಾರ ಕಾರ್ಕಳ ಮಂಡಲದ 209 ಬೂತ್ಗಳಲ್ಲಿ ಪಂಡಿತ್ಜೀಯವರಜನ್ಮ ದಿನಾಚರಣೆ ನಡೆಯುವುದು ಈ ವರ್ಷದ ವಿಶೇಷವಾಗಿರುತ್ತದೆ.
ಜಿಲ್ಲಾ ಕಾರ್ಯದರ್ಶಿ ರವೀಂದ್ರಕುಮಾರ್, ಪಂಡಿತ್ ದೀನ್ದಯಾಳ್ ಉಪಾದ್ಯಾಯ ಅನುಪ್ಠಾನದ ಜಿಲ್ಲಾ ಸಂಚಾಲಕಿ ಸವಿತಾ ಕೋಟ್ಯಾನ್, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಜಯರಾಮ್ ಸಾಲ್ಯಾನ್, ನವೀನ್ ನಾಯಕ್, ಕಾರ್ಯದರ್ಶಿಗಳಾದ ಅನಂತ್ಕೃಷ್ಣ ಶೆಣೈ, ಶಂಕರ್ಕುಂದರ್, ಪಕ್ಷದ ವಕ್ತಾರ ಕೆ.ಎಸ್. ಹರೀಶ್ ಶೆಣೈ, ಪುರಸಭಾ ಅಧ್ಯಕ್ಷೆ ಸುಮಾಕೇಶವ್, ಸದಸ್ಯ ನಿರಂಜನ್ಜೈನ್, ಎಸ್. ಸಿ. ಮೋರ್ಚಾ ತಾಲೂಕು ಉಸ್ತುವಾರಿ ಶ್ರೀನಿವಾಸ್ಕಾರ್ಲ, ಕಛೇರಿ ವ್ಯವಸ್ಥ ಪ್ರಮುಖರಾದ ಕೆ. ಸುಧಾಕರ್ ಪೂಜಾರಿ, ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.