ಉಡುಪಿ, ಸೆ.25 (DaijiworldNews/HR): ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯ ದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.
ಸೆ. 23 ರಂದ ಹೆರಿಗೆಗೆ ಸಂಬಂಧಿಸಿ ಕುಂದಾಪುರ ಉಷಾ (29) ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರ ತೆಗೆಯಲಾಗಿದೆ. ಈ ವೇಳೆ ತಾಯಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಮಣಿಪಾಲಕ್ಕೆ ಸ್ಥಳಾಂತರಿಸಿದ್ದಾರೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಧುಸೂದನ್ ನಾಯಕ್ ಈ ಘಟನೆಯ ಕುರಿತು ಸ್ಪಷ್ಟನೆ ನೀಡಿದ್ದು, ಉಷಾ ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸೆಪ್ಟೆಂಬರ್ 23 ದಾಖಲಿಸಲಾಗಿದ್ದು, ವೈದ್ಯರು ಸಾಮಾನ್ಯ ಹೆರಿಗೆಗಾಗಿ ಕಾಯುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಹುಟ್ಟಲಿರುವ ಮಗುವಿನ ಹೃದಯದಲ್ಲಿ ತೊಂದರೆ ಕಂಡುಬಂದಿದ್ದು ತಕ್ಷಣ ಸಿಸೇರಿಯನ್ ಶಸ್ತ್ರಚಿಕಿತ್ಸೆಗಾಗಿ ವರ್ಗಾಯಿಸಲಾಯಿತು. ಬಳಿಕ ಉಷಾ ಅವರಿಗೆ ಒಮ್ಮೆಳೆ ಪಿಡ್ಸ್ ಕಾಣಿಸಿಕೊಂಡು ಆಕೆಯ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿತು. ವೈದ್ಯಕೀಯದಲ್ಲಿ ಇದನ್ನು ಪ್ರೆಗ್ನೆನ್ಸಿ -ಪ್ರೇರಿತ ಅಧಿಕ ರಕ್ತದೊತ್ತಡ (PIH) ತೊಡಕುಗಳು ಎಂದು ಕರೆಯಲಾಗುತ್ತದೆ.
ಇನ್ನು ಆಕೆಗೆ ಉಸಿರಾಟದ ಮಟ್ಟ ಕಡಿಮೆಯಾದ ಕಾರಣ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿತ್ತು. ಕೆಲವೊಮ್ಮೆ ಈ ಸಮಯದಲ್ಲಿ ಬಿ.ಪಿಯಲ್ಲಿ ಏರುಪೇರು ಆಗುತ್ತದೆ. ಹಾಗಾಗಿ ವೈದ್ಯರು ಆಕೆಯನ್ನು ಉತ್ತಮ ಚಿಕಿತ್ಸೆಗಾಗಿ ಮಣಿಪಾಲಗೆ ಸ್ಥಳಾಂತರಿಸಲು ಸೂಚಿಸಿದ್ದು, ಆಕೆ ಆಸ್ಪತ್ರೆಯ ಮಾರ್ಗದಲ್ಲಿ ಮೃತಪಟ್ಟಿದ್ದಾಳೆ" ಎಂದರು.
ಆಕೆಯ ಹಠಾತ್ ಸಾವಿನಿಂದ ಕಂಗಾಲಾಗಿರುವ ಉಷಾ ಅವರ ಕುಟುಂಬ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮೊದಲಿನಿಂದಲೂ ಆಕೆಯನ್ನು ನೋಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. "ಅವಳು ಹೆರಿಗೆಯಲ್ಲಿದ್ದಾಗ ನಾವು ಅವಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಸಿಸೇರಿಯನ್ ಮಾಡಿದ ಪ್ರಸೂತಿ ವೈದ್ಯರಿಂದ ನಮಗೆ ಸ್ಪಷ್ಟೀಕರಣ ಬೇಕು" ಎಂದು ಅವರು ಆಗ್ರಹಿಸಿದರು.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಶ್ರೀಕಾಂತ್ ಎಂಬವರ ಪತ್ನಿಯಾಗಿರುವ ಉಷಾ ಅವರು ವೃತ್ತಿಯಲ್ಲಿ ಶಿಕ್ಷಯಾಗಿದ್ದಾರೆ.