ಉಡುಪಿ,ಸೆ 25 (DaijiworldNews/MS): ಉಡುಪಿಯ ಪ್ರಸಿದ್ದ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರ ಸೇವೆಯಲ್ಲಿ ಸೆಪ್ಟೆಂಬರ್ 24, ಶುಕ್ರವಾರ ಭಾಗವಹಿಸಿದರು.
ಕಡಿಯಾಳಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸಾಗುತ್ತಿದ್ದು ಸುತು ಪೌಳಿಯ ಕಾರ್ಯದ ಭಾಗವಾಗಿ, ಶೋಭಾ ಅವರು ಗುದ್ದಲಿ ಮತ್ತು ರಬ್ಬರ್ ಬುಟ್ಟಿಯನ್ನು ಹಿಡಿದು ಒಂದು ಗಂಟೆಗೂ ಹೆಚ್ಚು ಕಾಲ ಕಲ್ಲು ಮಣ್ಣು ಸಾಗಿಸುವ ಕರ ಸೇವೆ ಮಾಡಿದರು. ಈ ಕೆಲಸದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಕೈಜೋಡಿಸಿದರು.
ಈ ದೇವಸ್ಥಾನವು ದುರ್ಗಾದೇವಿಗೆ ಸಮರ್ಪಿತವಾಗಿದೆ, 1200 ವರ್ಷಗಳ ಇತಿಹಾಸವನ್ನು ಹೊಂದಿದೆ .ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಕಡಿಯಾಳಿ ದೇವಾಲಯ ಕ್ರಿ.ಶ. 7 - 8ನೇ ಶತಮಾನದಿಂದ ಸನ್ನಿಹಿತಳಾಗಿ ಭಕ್ತರನ್ನು ರಕ್ಷಿಸುತ್ತಿದ್ದಾಳೆ ಎನ್ನುವುದು ನಂಬಿಕೆ.
ಬಳಿಕ ಮಾತನಾಡಿದ ಸಚಿವೆ, " ದೇವಸ್ಥಾನದ ಕರಸೇವೆಯಲ್ಲಿ ಭಾಗಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು. ದೇಶದ ಸ್ವಯಂಸೇವಕರು ಮತ್ತು ಗ್ರಾಮಸ್ಥರ ಕರಸೇವೆಯಿಂದ ಅನೇಕ ದೇವಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ನವೀಕರಿಸಲಾಗಿದೆ. ದೇವಸ್ಥಾನದ ಸುತ್ತು ಪೌಲಿ ಆದಷ್ಟು ಬೇಗ ಪೂರ್ಣಗೊಳ್ಳಲಿ ಎಂದು ಹಾರೈಸುತ್ತೇನೆ. ಎಲ್ಲರೂ ವಯಸ್ಸಿನ ಚುರುಕಿನಿಂದ ಭಾಗವಹಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಯಿತು ಮತ್ತು ಅವರೇ ನಿಜವಾದ ಸ್ಫೂರ್ತಿ "ಎಂದು ಅವರು ಹೇಳಿದರು.
ಈ ಸಂದರ್ಭ ರಾಘವೇಂದ್ರ ಕಿಣಿ, ಉಡುಪಿ, ಪ್ರಧಾನ ಕಾರ್ಯದರ್ಶಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಕೌನ್ಸಿಲರ್ ಗಳಾದ ರಜನಿ ಹೆಬ್ಬಾರ್, ಮೋಹನ್ ಉಪಾಧ್ಯ, ಶಿಲ್ಪಾ ರಘುಪತಿ ಭಟ್, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ಭಾರತಿ ಚಂದ್ರಶೇಖರ್, ನಿರ್ವಹಣಾ ಸಮಿತಿಯ ಸದಸ್ಯರು ದೇವಸ್ಥಾನ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ಅರ್ಚಕರು ಮತ್ತು ಕೆಲಸ ಮಾಡುವ ಸಿಬ್ಬಂದಿ, ಗ್ರಾಮಸ್ಥರು, ಸ್ವಯಂಸೇವಕರು ಹಾಜರಿದ್ದರು.