ಮೂಡುಬಿದಿರೆ, ಸೆ. 24 (DaijiworldNews/SM): ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ ಎಂದು ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದ್ದಾರೆ.
ಮೂಡುಬಿದಿರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ವ್ಯಾಪಾರ, ಈ ವ್ಯಾಪಾರದಲ್ಲಿ ಎಲ್ಲರೂ ಇದ್ದಾರೆ. ಗೋಮಾತೆ ಪ್ರೀತಿ ಇದ್ರೆ ಮೊದಲು ಗೋ ರಕ್ಷಣೆ ಮಾಡಿ. ನಮ್ಮ ನಾಡ ತಳಿಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಿ. ಗೋವುಗಳನ್ನು ಸಾಕುವ ಮೂಲಕ ಗೋವಿನ ಪ್ರೀತಿ ತೋರಿಸಿ ಎಂದಿದ್ದಾರೆ.
ನನ್ನ ಮನೆಯಲ್ಲಿ ಬೇರೆ ಬೇರೆ ತಳಿಯ ೫೦ ಗೋವುಗಳಿವೆ. ಗೋವು ಸಾಕುವ ಆಸಕ್ತಿಯಿರುವವರಿಗೆ ಗೋವು ಕೊಟ್ಟಿದ್ದೇವೆ. ಕಡಬದ ಗೋಸಾಗಾಟವನ್ನು ಕಾಂಗ್ರೆಸ್ ಕಾರ್ಯಕರ್ತರೇ ಹಿಡಿದಿದ್ದಾರೆ. ಕಡಬದ ಪ್ರಕರಣದಲ್ಲಿ ಸಾಗಾಟ ಮಾಡುತ್ತಿದ್ದದ್ದೆ ಬಿಜೆಪಿಯವರು. ಗೋವು ಸಂರಕ್ಷಣೆಗೆ ಒಂದು ಕಾನೂನು ತನ್ನಿ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಕಾನೂನು ತರಲು ಯಾಕೆ ಸಾಧ್ಯವಾಗಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬೀಫ್ ಎಕ್ಸ್ಪೋರ್ಟ್ ಕಾರ್ಖಾನೆಗಳೇ ಬಿಜೆಪಿಯವರದ್ದು. ಬಿಜೆಪಿಯ ಸಂಸದರದ್ದೇ ಬೀಫ್ ಎಕ್ಸ್ಪೋರ್ಟ್ ಕಾರ್ಖಾನೆಗಳಿವೆ ಎಂದು ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಆರೋಪಿದ್ದಾರೆ.