ಕಾರ್ಕಳ, ಸೆ. 24 (DaijiworldNews/SM): ಹಟ್ಟಿಗೆ ನುಗ್ಗಿ ಬೆಲೆಬಾಳುವ ಗೋವುಗಳನ್ನು ಕದ್ದು, ಮನೆ ಮಂದಿಗೆ ತಲವಾರು ಝಳಪಿಸಿ ಜೀವ ಬೆದರಿಕೆಯೊಡ್ಡುವ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೂಡಬಿದ್ರಿ ಗಂಟಾಲ್ಕಟ್ಟೆ ಪರಿಸರದ ಝಬೀರ್, ಇಚ್ಚ ಅಲಿಯಾಸ್ ಮಹಮ್ಮದ್ ಹನೀಫ್, ಸಲೀಮ್ ಎಂಬವರಿಗೆ ಕಾರ್ಕಳ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಕಡ್ತಲದ ಸತೀಶ್ ನಾಯ್ಕನನ್ನು ಮೊದಲ ಹಂತದಲ್ಲಿ ಅಜೆಕಾರು ಪೊಳೀಸರು ಬಂಧಿಸಿ ವಿಚಾರಣೆಗೆ ಗುರಿ ಪಡಿಸಿದಾಗ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಮೂವರ ಮಾಹಿತಿ ಲಭಿಸಿತು.
ಇಂತಹದೇ ಪ್ರಕರಣದಲ್ಲಿ ಇನ್ನಷ್ಟು ಆರೋಪಿತರು ಇದ್ದು ಅವರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ವ್ಯವಸ್ಥಿತವಾಗಿ ಗೋವುಗಳನ್ನು ಕದ್ದು ಮಾರಾಟ ಮಾಡುವ ಜಾಲದಲ್ಲಿ ಮೂರು ವಿಭಾಗಗಳಿದ್ದು, ಬ್ರೋಕರ್ಗಳು ಮಾಹಿತಿ ನೀಡಿದರೆ, ಅದನ್ನು ಕದ್ದು ಸಾಗಾಟ ಮಾಡುವುದಕ್ಕೆ ಹಾಗೂ ಮನೆ ಮಂದಿಗೆ ಬೆದರಿಸುವುದಕ್ಕೆ ಮತ್ತೊಂದು ತಂಡ ಸಕ್ರಿಯಾವಾಗಿತ್ತು. ಅಕ್ರಮ ಸಕಾಯಿಖಾನೆಯಲ್ಲಿ ಗೋವುಗಳನ್ನು ವಿಧಿಸಿ ಅಗತ್ಯ ಉಳ್ಳವರಿಗೆ ಅದನ್ನು ಸರಬರಾಜು ಮಾಡುವುದಕ್ಕೆ ಮತ್ತೊಂದು ತಂಡ ಕಾರ್ಯಚರಿಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.