ಕಾರ್ಕಳ, ಸೆ 24 (DaijiworldNews/MS): ಮಾಳ ಹುಕ್ರಟ್ಟೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿಯಲ್ಲಿ ಬಿದ್ದ ಚಿರತೆಯನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ರೋಶನ್ ಎಂಬವರಿಗೆ ಸೇರಿದ ಜಾಗದ ಬಾವಿಯಲ್ಲಿ ಚಿರತೆ ಬಿದ್ದ ಕುರಿತು ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿದೆ. ಈ ಹಿನ್ನಲೆಯಲ್ಲಿ ಮೂಡಬಿದ್ರಿ ಆರ್.ಎಫ್ ಪ್ರಕಾಶ್, ಕಾರ್ಕಳ ಆರ್ಎಫ್ ದಿನೇಶ್ ನೇತೃತ್ವದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಚಿರತೆಯನ್ನು ಸೆರೆ ಹಿಡಿಸಿದ್ದಾರೆ.
ಆಹಾರ ಹುಡುಕಿಕೊಂಡು ಕಾಡು ಪ್ರಾಣಿಯನ್ನು ಅಡ್ಡಾಡಿಸಿ ಬಂದ ಚಿರತೆ ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆಯಾಗಿದೆ. ಘಟನಾ ಸ್ಥಳವು ಕಾರ್ಕಳ ತಾಲೂಕು ವ್ಯಾಪ್ತಿಗೆ ಒಳಪಡಿದಾದರೂ ಮೂಡಬಿದ್ರಿ ಅರಣ್ಯ ಇಲಾಖೆ ವಿಭಾಗಕ್ಕೆ ಒಳಪಟ್ಟಿದಾಗಿದೆ. ಸೆರೆ ಹಿಡಿದ ಚಿರತೆಯನ್ನು ಬೋನಿನಲ್ಲಿ ಕೂಡಿ ಹಾಕಿ ಮೂಡಬಿದ್ರಿ ಅರಣ್ಯ ಇಲಾಖಾ ಕಚೇರಿಗೆ ಕೊಂಡು ಹೋಗಲಾಗಿದೆ. ಅದನ್ನು ಪಿಳಿಪುಳ ನಿಸರ್ಗಧಾಮಕ್ಕೆ ಕಳುಹಿಸಲು ಚಿಂತನೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.