ಕಾರ್ಕಳ, ಸೆ 24 (DaijiworldNews/MS): ಮೊಬೈಲ್ ಮೂಲಕ ಕರೆ ಮಾಡಿ ಪ್ರೇಮದ ಜಾಲಕ್ಕೆ ಸಿಲುಕಿಸಿ ಕೆಲ ವರ್ಷಗಳಿಂದ ನಿರಂತರ ಅತ್ಯಾಚಾರ ವೆಸಗಿಸ ಆರೋಪಿಯೋರ್ವ ಯುವತಿಗೆ ಹಲ್ಲೆ ನಡೆಸಿ ಮೊಬೈಲ್ ಎಗರಿಸಿದ ಘಟನೆ ಕಾರ್ಕಳ ನಗರದ ಪತ್ತೊಂಜಿಕಟ್ಟೆ ಎಂಬಲ್ಲಿ ನಡೆದಿದೆ.
ಬಂಗ್ಲೆಗುಡ್ಡೆಯ ನಯಾಜ್(26) ಪ್ರಕರಣದ ಆರೋಪಿ.
ಕಳೆದ ವರ್ಷ ಮೇ. 30 ರಂದು ಬಂಗ್ಲೆಗುಡ್ಡೆಯಲ್ಲಿರುವ ತನ್ನ ಮನೆಗೆ ಯಾರೂ ಇಲ್ಲದ ಸಮಯ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಆ ಬಳಿಕವೂ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದ. ಇದಾದ ಬಳಿಕ ಸೆ. 23 ರಂದು ತನ್ನ ಜೊತೆ ಬರಬೇಕೆಂದು ಬಲವಂತ ಮಾಡಿ ಕಾರ್ಕಳ ಬಸ್ ಸ್ಟಾಂಡ್ನಿಂದ ಮೋಟಾರ್ ಸೈಕಲಿನಲ್ಲಿ ಪತ್ತೊಂಜಿಕಟ್ಟೆ ಸಾಮಿಲ್ ಬಳಿ ಕರೆದುಕೊಂಡು ಹೋಗಿ ಕೈಯಿಂದ ಕೆನ್ನೆಗೆ ಹೊಡೆದು ಬ್ಯಾಗಿನಲ್ಲಿದ್ದ ಮೊಬೈಲ್ ಫೋನನ್ನು ಕಸಿದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಸಂತ್ರಸ್ತೆ ಯುವತಿ ನೀಡಿದ ದೂರಿನನ್ವಯ ನಗರ ಠಾಣೆಯಲ್ಲಿ ಕೇಸುದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.