ಮಲ್ಪೆ, ಸೆ.24 (DaijiworldNews/HR): ಮಲ್ಪೆ ಕಡಲತೀರದಲ್ಲಿ ಸ್ಥಳೀಯರ ಎಚ್ಚರಿಕೆಯನ್ನು ಉಲ್ಲಂಘಿಸಿ ನೀರಿಗಿಳಿದ ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಸಮುದ್ರ ಅಲೆಗಳ ಸೆಳೆತಕ್ಕೆ ಸಿಲುಕಿದ ಕಲಬುರ್ಗಿ ಜಿಲ್ಲೆಯ ರಾಮ ಮಂದಿರದ ನಿವಾಸಿ ಅನಿಲ್ ಕುಮಾರ್ (21), ಅಬ್ಬಾಸ್ ಅಲಿ (19) ಮತ್ತು ಅನಿಲ್ ಕುಮಾರ್ (19) ಅವರನ್ನು ರಕ್ಷಿಸಲಾಯಿತು.
ಜೀವ ರಕ್ಷಕ ತಂಡದವರು ಜೆಸ್ಕಿ ಮೂಲಕ ರಕ್ಷಣಾ ಕಾರ್ಯ ನಡೆಸಿದ್ದು, ಈ ಮೂವರಿಗೂ ಮೊದಲೇ ಜೀವರಕ್ಷಕ ತಂಡದವರು ಎಚ್ಚರಿಕೆ ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ನೀರಿಗಿಳಿದ್ದರು ಎನ್ನಲಾಗಿದೆ.
ಇನ್ನು ಮಳೆಗಾಲದಲ್ಲಿ ಸಮುದ್ರ ಅಬ್ಬರದಿಂದ ಕೂಡಿದ್ದಾಗ ಯಾರೂ ನೀರಿಗೆ ಇಳಿಯದಂತೆ ಬಲೆ ಕಟ್ಟಲಾಗಿದ್ದು, ಕಳೆದ ವಾರವಷ್ಟೇ ಇದನ್ನು ತೆರವುಗೊಳಿಸಲಾಗಿತ್ತು.