ಮಂಗಳೂರು, ಸೆ 24 (DaijiworldNews/MS): ನಗರದ ಕೊಟ್ಟಾರ ಚೌಕಿ ಬಳಿಯ ಹೊಟೇಲೊಂದರ ಎದುರು ಬುಧವಾರ ರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿತ್ತಾ , ಪರಸ್ಪರ ಕಿರುಚಾಟದಲ್ಲಿ ನಿರತರಾಗಿದ್ದ ಆರೋಪದ ಮೇಲೆ ಮೂವರನ್ನು ಊರ್ವ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಜಿತ್ ಕುಮಾರ್ , ನಿತಿನ್ ಕುಲಾಲ್ , ಮತ್ತು ವಿನೋದ್ ಕುಲಾಲ್ ಅವರು ಬಿಯರ್ ಬಾಟಲ್ ಹಿಡಿದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಪಾಯಕಾರಿಯಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.