ಉಪ್ಪಿನಂಗಡಿ, ಸ.23 (DaijiworldNews/HR): ಒಂದು ತಿಂಗಳಿಗಿಂತ ಹೆಚ್ಚು ಕಾಲ ನಾಪತ್ತೆಯಾಗಿದ್ದ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿ ಮೊಬೈಲ್ ಸಂಖ್ಯೆ ಹಿಮಾಚಲ ಪ್ರದೇಶದಲ್ಲಿ ಇರುವ ವದಂತಿ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಆತ ಸಂಪರ್ಕ ಹೊಂದಿದ್ದ ಎಂಬ ವಿಷಯವನ್ನು ಪೊಲೀಸರು ನಿರಾಕರಿಸಿದ್ದು, ಈ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆ
ವಿವರಗಳ ಪ್ರಕಾರ, ತಾಲ್ಲೂಕಿನ 34 ನೇ ನೆಕ್ಕಿಲಾಡಿ ಗ್ರಾಮದ ಮೇದರಬೆಟ್ಟು ಅಪಾರ್ಟ್ಮೆಂಟ್ ನಿವಾಸಿ ರಫೀಕ್ ಖಾನ್ ಅವರ ಪತ್ನಿ ಫಾತಿಮಾ (34) ಅವರು ಆಗಸ್ಟ್ 8 ರಂದು ರಾಘವೇಂದ್ರ ಬಳಿಯ ಎ ಟು ಝಡ್ ಗ್ಯಾರೇಜ್ ಮಾಲೀಕ ಮೊಹಮ್ಮದ್ ರಫೀಕ್ ಖಾನ್ ಎಂಬಾತನನ್ನು 2 ನೇ ಮದುವೆಯಾಗಿದ್ದು ಫಾತಿಮಾ ತನ್ನ ಪತಿಯೊಂದಿಗೆ ಮೇದರಬೆಟ್ಟು ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಳು. ಜುಲೈ 12 ರಂದು ಮೊಹಮ್ಮದ್ ರಫೀಕ್ ಖಾನ್ ಬೆಂಗಳೂರಿಗೆ ಹೋಗಿದ್ದು, ತಾನು ವಾಹನಗಳಿಗೆ ಬೇಕಾದ ಪಾರ್ಟ್ಸ್ ಖರೀದಿಸಬೇಕೆಂದು ಹೇಳಿದ್ದು, ಬಳಿಕ ಜುಲೈ 18 ರಂದು ಫಾತಿಮಾಗೆ ಕರೆ ಮಾಡಿ ಬೆಂಗಳೂರಿನಿಂದ ಬೆಳಗ್ಗಿನ ಬಸ್ಸಿನಲ್ಲಿ ಹೊರಟು ಬರುತ್ತೇನೆಂದು ಹೇಳಿ ಫೋನ್ ಕಟ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿದ್ದು ನಂತರ ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಫಾತಿಮಾ ದೂರು ನೀಡಿದ್ದರು.
ಮೊಹಮ್ಮದ್ ರಫೀಕ್ ಖಾನ್ ಅವರ ಪತ್ನಿ ಫಾತಿಮಾ ನೀಡಿದ ವಿವರಗಳ ಪ್ರಕಾರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ರಫೀಕ್ ಖಾನ್ ಅವರನ್ನು ಸೆಪ್ಟೆಂಬರ್ 22 ರಂದು ಪೊಲೀಸರು ಪತ್ತೆ ಹಚ್ಚಿದ್ದು, ಅವರ ಪತ್ನಿ ಫಾತಿಮಾ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡುವಂತೆ ಮಾಡಿದರು. ವಿಡಿಯೋದಲ್ಲಿ ತನ್ನೊಂದಿಗೆ ಮಾತನಾಡಿದ ವ್ಯಕ್ತಿ ನಿಜಕ್ಕೂ ಆಕೆಯ ಪತಿ ಮೊಹಮ್ಮದ್ ರಫೀಕ್ ಖಾನ್ ಎಂದು ಫಾತಿಮಾ ಪೊಲೀಸರಿಗೆ ದೃಢಪಡಿಸಿದ್ದು, ಒಂದು ತಿಂಗಳ ನಂತರ ಮನೆಗೆ ಮರಳುವುದಾಗಿ ಖಾನ್ ಪೊಲೀಸರಿಗೆ ಭರವಸೆ ನೀಡಿದರು. ಹಾಗಾಗಿ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.
ಇತ್ತಿಚೆಗೆ ಪತ್ರಿಕೆ, ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು ಸದ್ರಿ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ಪ್ರಸಾರವಾದ ವಿಷಯವು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಈ ವಿಷಯವನ್ನು ಪೊಲೀಸರು ತನಿಖೆ ಮಾಡಿದಾಗ ಈ ಆರೋಪ ಸುಳ್ಳು ಎಂದು ತಿಳಿದು ಬಂದಿದೆ.