ಉಡುಪಿ, ಸೆ 23 (DaijiworldNews/MS): ಅಪರಿಚಿತರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಗ್ರಾಹಕರೊಬ್ಬರು 65,000 ರೂ. ಕಳೆದುಕೊಂಡ ಘಟನೆ ಸೆ. 22ರ ಬುಧವಾರ ನಡೆದಿದೆ.
ಕಿದಿಯೂರಿನ ಕಾರ್ತಿಕ್ರೆಸಿಡೆನ್ಸಿ ಗಿರೀಶ್ ಕೆ.ಸಿ (36) ಎಂಬವರು ಉಡುಪಿ ಎಸ್ ಬಿ ಐ ಬ್ಯಾಂಕ್ ಸಾಗರ ಬ್ರಾಂಚ್ನಲ್ಲಿ ಖಾತೆ ಹೊಂದಿದ್ದು, ಯಾರೋ ಅಪರಿಚಿತರು ಲಿಂಕ್ನ್ನು ಮೇಸೆಜ್ ಮೂಲಕ ಕಳುಹಿಸಿ, ನಂತರ ಕರೆ ಮಾಡಿ ಬ್ಯಾಂಕ್ ಅಧಿಕಾರಿ ಮಾತನಾಡುತ್ತಿರುವುದಾಗಿ ನಂಬಿಸಿ, ಕೆವೈಸಿ ಅಪ್ಡೇಟ್ ಮಾಡಲು ಲಿಂಕ್ನ್ನು ಕ್ಲಿಕ್ ಮಾಡುವಂತೆ ತಿಳಿಸಿದ್ದಾರೆ.
ಬ್ಯಾಂಕ್ ಅಧಿಕಾರಿ ಎಂದು ನಂಬಿ ಲಿಂಕ್ನ್ನು ಒತ್ತಿದಾಗ ಗಿರೀಶ್ ಅವರ ಖಾತೆಯಿಂದ 3 ಸಲ ಟ್ರಾನ್ಸ್ ಕ್ಷನ್ ಮಾಡಿ 25,000, 20,000, 20,000 ದಂತೆ ಒಟ್ಟು ರೂಪಾಯಿ 65,000 ರೂ. ಹಣವನ್ನು ವಿದ್ಡ್ರಾ ಮಾಡಲಾಗಿದೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 66(d) ಐ.ಟಿ. ಆಕ್ಟ್ ಮತ್ತು ಕಲಂ : 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ