ಪುತ್ತೂರು, ಸ.23 (DaijiworldNews/HR): ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೃಷ್ಣನಗರ ಚರ್ಚ್ ಬಳಿ ಘಟನೆ ಸೆ.23 ರಂದು ಬೆಳಕಿಗೆ ಬಂದಿದೆ.
ಕೃಷ್ಣನಗರದಲಿರುವ ಗೋಪಾಲ ಎಂಬವರ ಅಂಗಡಿಯ ಪಕ್ಕದಲ್ಲಿರುವ ಮರ ಏರಿ ಶೀಟ್ ಜಾರಿಸಿ ಒಳನುಗ್ಗಿ ಅಂಗಡಿಯಲ್ಲಿ ದಾಸ್ತಾನಿದ್ದ 2 ಗೋಣಿ ಸಿಗರೇಟು ಪ್ಯಾಕೇಟ್ ಮತ್ತು ಗುಟ್ಕಾ ಹಾಗು ಡ್ರಾವರ್ ನಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ.
ಇನ್ನು ಅದೇ ಅಂಗಡಿಯ ಹತ್ತಿರದ ಲತೀಫ್ ಎಂಬವರ ತರಕಾರಿ ಅಂಗಡಿಯ ರೋಲಿಂಗ್ ಶೆಟರ್ ಮೂಲಕ ಒಳನುಗ್ಗಿದ ಕಳ್ಳರು ಡಬ್ಬದಲ್ಲಿ ಇಟ್ಟಿದ್ದ ರೂ.300 ಅನ್ನು ಕಳವು ಮಾಡಿದ್ದಾರೆ.
ಅನೇಕ ವರ್ಷಗಳ ಹಿಂದೆ ಸಾಲ್ಮರ ಕ್ರಾಸ್ ಬಳಿ ಗೂಡಂಗಡಿಯನ್ನು ಗೋಪಾಲ ಅವರು ಹೊಂದಿದ್ದು, ಈ ವೇಳೆ ಅವರ ಗೂಡಂಗಡಿ ಬೆಂಕಿಗಾಹುತಿ ಆಗಿತ್ತು. ಅದಾದ ಬಳಿಕ ರಸ್ತೆ ಅಗಲೀಕರಣದಿಂದ ಅವರು ಅಂಗಡಿಯನ್ನು ಕೃಷ್ಣನಗರಕ್ಕೆ ಸ್ಥಳಾಂತರಿಸಿದ್ದರು. ಆ ಬಳಿಕವು ಒಮ್ಮೆ ಅಂಗಡಿಯಿಂದ ಕಳವಾಗಿದ್ದು ಇದೀಗ ಎರಡನೇ ಬಾರಿ ಕಳ್ಳತನ ನಡೆದಿದೆ.