ಮಂಗಳೂರು, ಸ.23 (DaijiworldNews/HR): ಯುನಿಕ್ಸ್ ಸನ್ರೈಸ್ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಬೆಂಗಳೂರು ಇದರ ವತಿಯಿಂದ ನಡೆದ 17ನೇ ವರ್ಷ ಕಿರಿಯ ಹುಡುಗಿಯರ ವಿಭಾಗದ ರಾಜ್ಯ ಶ್ರೇಣಿಯ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಮಂಗಳೂರಿನ ಇಬ್ಬರು ಕುವರಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ದ್ವೀತಿಯ ಸ್ಥಾನ ಪಡೆದ ಕುವರಿಯರನ್ನು ಕು.ಟ್ರಿವ್ಯ ಕ್ರೇಡ ವೇಗಸ್ ಹಾಗೂ ಕೆ. ಅನ್ಯನ ಜೋಶಿ ಎಂದು ಗುರುತಿಸಲಾಗಿದೆ.
ಕುಮಾರಿ ಟ್ರಿವ್ಯ ಕ್ರೇಡ ವೇಗಸ್ ಪ್ರೆಸಿಡೆನ್ಸಿ ಕಾಲೇಜು ಮಂಗಳೂರು ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಹಾಗೂ ಕೆ ಅನ್ಯನ ಜೋಶಿಯವರು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನ ವಿಜ್ಞಾನದ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.