ಮಂಗಳೂರು, ಸೆ.22 (DaijiworldNews/PY): ನಗರದ ಹೊರವಲಯದ ಶಕ್ತಿನಗರದ ಮುಗ್ರೋಡಿ ಬ್ರಹ್ಮಲಿಂಗೇಶ್ವರ ದೈವಸ್ಥಾನದಿಂದ ಕಳವು ಮಾಡಿದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಆಟೋ ಚಾಲಕ ಪ್ರೇಮ್ ಅವರು ಪೊಲೀಸರಿಗೆ ಸಹಾಯ ಮಾಡಿದ್ದಾರೆ.
ಮರಕಡ ನಿವಾಸಿ ಉಮೇಶ್ (42) ಬಂಧಿತ ಆರೋಪಿ.
ಈತ ದೈವಸ್ಥಾನದ ಎರಡು ಬಾಗಿಲಿನ ಬೀಗ ಮುರಿದು 50,000 ರೂ. ಮೌಲ್ಯದ ವಷ್ತುಗಳನ್ನು ಕಳವು ಮಾಡಿ ಭಾನುವಾರ ಬೆಳಗ್ಗೆ ರಿಕ್ಷಾ ಏರಿ ಪರಾರಿಯಾಗಲು ಯತ್ನಿಸಿದ್ದ.
ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದರು. ಪೊಲೀಸರು ದಾರಿಯಲ್ಲಿ ಬರುತ್ತಿದ್ದ ಸಂದರ್ಭ ಪ್ರೇಮ್ ಅವರಲ್ಲಿ ಮಾಹಿತಿ ಕೇಳಿದರು. ಆ ಸಂದರ್ಭ ಪ್ರೇಮ್ ಅವರಿಗೆ ತನ್ನ ಆಟೋದಲ್ಲಿ ವ್ಯಕ್ತಿಯೋರ್ವ ದಾರಿವರೆಗೆ ಬಂದಿರುವುದು, ಚಿಲ್ಲರೆ ಹಣ ನೀಡಿರುವುದು, ಗೋಣಿಕಟ್ಟೊಂದನ್ನು ಕೊಂಡೊಯ್ಯುವ ಬಗ್ಗೆ ವಿಚಾರಿಸುವುದು ಜ್ಞಾಪಕಕ್ಕೆ ಬಂತು. ಆ ವಿಚಾರವನ್ನು ತಿಳಿಸಿದ್ಧಾರೆ.
ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.