ಉಡುಪಿ, ಸೆ.21 (DaijiworldNews/HR): ಇತ್ತೀಚೆಗಷ್ಟೇ ಎಸ್ಡಿಪಿಐ (ಸೋಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಸಂಘಟನೆಯು ದೆಹಲಿಯಲ್ಲಿ ನಡೆದ ಸಿವಿಲ್ ಡಿಫೇನ್ ಮಹಿಳಾ ಪೋಲಿಸ್ ಅಧಿಕಾರಿ ಸಾಬೀಯಾ ಸೈಫಿಯ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಖಂಡಿಸಿ, ಹಾಗೂ ಹತ್ಯೆಯ ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸುವಂತೆ ಪ್ರತಿಭಟನೆ ಜಾಥವನ್ನು ಆಯೋಜಿಸಿತ್ತು. ಆದರೆ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಕಾರಣಕ್ಕೆ ಎಸ್ಡಿಪಿಐ ಮೇಲೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ರೀತಿಯಾಗಿ ಇಲಾಖೆ ತಾರತಮ್ಯ ಮಾಡುತ್ತಿದೆ. ಕೇಸು ದಾಖಲಿಸಿ ಪ್ರತಿಭಟನೆಯ ಹಕ್ಕನ್ನು ಕಸಿಯುವ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆ ವಿರುದ್ಧ ಕಾನೂನು ಹೋರಾಟಕ್ಕೆ ಎಸ್ಡಿಪಿಐ ಬದ್ಧ ಎಂದು ಎಸ್ಡಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
ಮಂಗಳವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಉಡುಪಿಯಲ್ಲಿ ಹಲವಾರು ಪಕ್ಷ ಗಳು , ಸಂಘಟನೆಗಳು ಪ್ರತಿಭಟನೆ ನಡೆಸಿವೆ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ರಾಜಕೀಯ ಕಾರ್ಯಕ್ರಮಗಳು ನಡೆದಿವೆ. ಆದರೆ ಇದುವರೆಗೆ ಯಾರ ಮೇಲೂ ಶಿಸ್ತು ಕ್ರಮಗಳನ್ನ ಪೊಲೀಸ್ ತೆಗೆದುಕೊಂಡಿಲ್ಲ" ಎಂದರು.
ಪ್ರತಿಭಟನೆ ಮುಗಿದ ಬಳಿಕ ಉಡುಪಿ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ವೃತ್ತ ನಿರೀಕ್ಷರ ಆದೇಶದ ಮೇರ ಹಲವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಸುಮಾರು 11 ಗಂಟೆ ರಾತ್ರಿಯ ತನಕ ಕಾಯಿಸಿ ಕೇಸು ದಾಖಲಿಸಿ ಬಿಟ್ಟಿರುತ್ತಾರೆ. ಅಲ್ಲದೇ ನಮ್ಮ ಈ ಪ್ರತಿಭಟನಾ ಸಭೆಗೆ ಅತಿಥಿಗಳಾಗಿ ಭಾಗವಹಿಸಿದ ಅತಿಥಿಗಳ ಮೇಲು ಹಾಗೂ ದಾಖಲಿಸಿರುತ್ತಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸುವ ಮೂಲಕ ತಾರತಮ್ಯ ನೀತಿಯನ್ನು ಮಾಡುತಿದ್ದಾರೆ, ಎಂದು ಭಾಸ್ಕರ್ ಘಟನೆಯನ್ನು ವಿವರಿಸಿದರು.
ಈ ಮೊದಲು ಕೊವೀಡ್ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಕೆಲವು ಸಂಘಟನೆಗಳ ಕಾರ್ಯಕ್ರಮಗಳು ನಡೆದಿರುತ್ತವೆ. ಆ ಸಂದರ್ಭದಲ್ಲಿ ಯಾವುದೇ ಕೇಸು ದಾಖಲಿಸದ ಪೋಲಿಸ್ ಇಲಾಖೆ ಈಗ 35 ಕ್ಕೂ ಅಧಿಕ ಮಂದಿಯ ಮೇಲೆ ಸೆಕ್ಷನ್ 107, 109 ಮತ್ತು 112 ನ ಕೇಸು ಹಾಕಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಮುಂದೆ ಪೊಲೀಸ್ ಇಲಾಖೆಯ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ .
ಮೊಹಮ್ಮದ್ ಇಲಿಯಾಸ್, ಜಿಲ್ಲಾಧ್ಯಕ್ಷರು, ಉಮಾನಾಥ್, ಎಸ್.ಡಿ.ಪಿ ಐ ಕಾಪು ಕ್ಷೇತ್ರದ ಅಧ್ಯಕ್ಷರು, ಆನಂದ್ ಮಿತ್ತ ರಾಯ್, ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ , ಮಾಜಿದ್ ಉಚ್ಚಿಲ, ಪ್ರಧಾನ ಕಾರ್ಯದರ್ಶಿ ಮೊದಲಾದವರು ಉಪಸ್ಥಿತರಿದ್ದರು.