ಮಂಗಳೂರು, ಸೆ 21(DaijiworldNews/MS): ನಗರದ ಪೊಲೀಸ್ ಇಲಾಖೆಗೆ ’ವಿಶೇಷ ಅತಿಥಿ’ ಸೇರ್ಪಡೆಯಾಗಿದ್ದು, ಪೊಲೀಸರಿಗೆ ಬಾಂಬ್ ಸೇರಿದಾಂತೆ ಮತ್ತಿತರ ಸ್ಫೋಟಕ ವಸ್ತುಗಳ ಪತ್ತೆಗೆ ಚುರುಕುಮತಿಯಾಗಿರುವ "ಈಕೆ" ಸಹಾಯ ಮಾಡಲಿದ್ದಾಳೆ...ಈಕೆಯೇ ರಾಣಿ.!
ಪೊಲೀಸ್ ಇಲಾಖೆಯಲ್ಲಿ ಶ್ವಾನದಳಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಹೀಗಾಗಿ ಮಂಗಳೂರು ನಗರ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ರಾಣಿ ಎಂಬ ಶ್ವಾನದ ಹೊಸ ಸೇರ್ಪಡೆಯಾಗಿದೆ. ನಗರ ಪೊಲೀಸ್ನ ಶ್ವಾನದಳದಲ್ಲಿ ಈ ಹಿಂದೆ 5 ಶ್ವಾನಗಳಿತ್ತು. ಅದರಲ್ಲಿ ಒಂದು ಸುಧಾ ಶ್ವಾನ ಕ್ಯಾನ್ಸರ್ ನಿಂದ ಜುಲೈ ತಿಂಗಳಲ್ಲಿ ಮೃತಪಟ್ಟಿತ್ತು. ಇದೀಗ ರಾಣಿ ಸೇರ್ಪಡೆಯಾಗಿ ಮತ್ತೆ ಮಂಗಳೂರು ಶ್ವಾನದಳಕ್ಕೆ ಬಲಬಂದಿದೆ.
ಬೆಂಗಳೂರು ಶ್ವಾನದಳ ತರಬೇತಿ ಕೇಂದ್ರದಲ್ಲಿ ಸ್ಫೋಟಕ ಪತ್ತೆ ತರಬೇತಿಯನ್ನು ಮುಗಿಸಿದ ರಾಣಿ ಶ್ವಾನವೂ ಮಂಗಳೂರು ನಗರಕ್ಕೆ ಕರ್ತವ್ಯ ನಿಯೋಜನೆಗೊಂಡಿದ್ದಾಳೆ. ಮನೋಜ್ ಶೆಟ್ಟಿ ಮತ್ತು ನಾಗೇಂದ್ರ ಇವರು ರಾಣಿಯ ಹ್ಯಾಂಡ್ಲರ್ ಆಗಿರಲಿದ್ದಾರೆ. ಈಕೆ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ಪತ್ತೆ ಬಗ್ಗೆ ಕರ್ತವ್ಯದಲ್ಲಿ ಪೊಲೀಸರಿಗೆ ಸಹಕರಿಸಲಿದ್ದಾಳೆ.