ಮಂಗಳೂರು, ಸೆ.21 (DaijiworldNews/HR): ನಗರದ ಕರಂಗಲಪಾಡಿ ಬಳಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಒಳಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ದುಷ್ಕರ್ಮಿಯೋರ್ವ ಮಚ್ಚಿನಿಂದ ದಾಳಿ ನಡೆಸಿದ ಪ್ರಕಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೋರ್ಬರು ಪ್ರತಿಕ್ರಿಯಿಸಿ ಆತ ಸಿಕ್ಕಿದರೆ ಎಲ್ಲರನ್ನು ಕೊಚ್ಚಿ ಹಾಕುತ್ತಿದ್ದ ಎಂದು ಹೇಳಿದ್ದಾರೆ.
ಆರೋಪಿ ನವೀನ್
ಈ ಕುರಿತು ಮಾತನಾಡಿರುವ ಸಿಬಂದಿ, "ನಾವು ಇನ್ನೊಂದು ಕೊಠಡಿಯಲ್ಲಿ ನಮ್ಮಷ್ಟಕ್ಕೆ ಕೆಲಸ ಮಾಡುತ್ತಿದ್ದೆವು. ಒಬ್ಬ ಒಳಗೆ ಬಂದ ಬೇರೆಯವರಂತೆಯೇ ಅವರು ಬಮ್ದಿರಬಹುದು ಎಂದುಕೊಂಡೆವು. ಆದರೆ ಆತ ಉದ್ದದ ಕತ್ತಿ ತೆಗೆದುಕೊಂಡು ಬಂದಿರುವುದನ್ನು ಕಂಡು ನನ್ನೊಂದಿಗೆ ಉಪನ್ಯಾಸಕರು, ಸೂಪರಿಡೆಂಟ್ ಕೂಡ ಹೊರಗೆ ಬಂದು ಇಲ್ಲೇ ಇದ್ದ ಪೊಲೀಸರಿಗೆ ಹೇಳಿದೆವು. ಮೂವರು ಒಳಗೆ ಸಿಕ್ಕಿಹಾಕಿಕೊಂಡಿದ್ದರು. ನಾವು ಕೂಡ ಬೊಬ್ಬೆ ಹೊಡೆದೆದಿದ್ದೇವೆ. ಕೈಗೆ ಗಾಯವಾಗಿದೆ ಮೇಡಂ ಹೊರಗೆ ಓಡಿಬಂದು ಯಾರು ಸಿಕ್ಕಿದ್ರು ಅವರನ್ನು ಎಲ್ಲರನ್ನು ಕೊಚ್ಚಿಹಾಕುವಂತೆ ಆತ ಇದ್ದ. ಬೇರೆ ದಿನಗಳಲ್ಲಿ ಉಪನ್ಯಾಸಕರು ಸೇರಿದಂತೆ 20 ಮಂದಿ ಸಿಬ್ಬಂದಿ ಕಚೇರಿಯಲ್ಲಿರುತ್ತಿದ್ದರು. ನಾಲ್ಕು ಉಪನ್ಯಾಸಕರನ್ನು ಹೊರತುಪಡಿಸಿ ಇತರ ಉಪನ್ಯಾಸಕರು ಹಲ್ಲೆಗೊಳಗಾದವರ ಪಕ್ಕದಲ್ಲಿಯೇ ಇದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕುಂದಾಪುರ ಕೋರ್ಟ್ ನಲ್ಲಿ ಪ್ಯೂನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ ನವೀನ್(31) ಎಂಬಾತನನ್ನು ಬಂಧಿಸಲಾಗಿದೆ.
ನಿರ್ಮಲಾ, ರಿನಾ ರಾಯ್, ಗುಣವತಿ ಮೇಲೆ ತಲ್ವಾರ್ ದಾಳಿ ನಡೆದಿದ್ದು, ಈ ಪೈಕಿ ನಿರ್ಮಲಾ ಅವರ ಸ್ಥಿತಿ ಗಂಭೀರವಾಗಿದೆ. ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿಯು ಉಪನ್ಯಾಸಕಿ ಒಬ್ಬರಿಗೆ ಗಿಫ್ಟ್ ಕೊಡಲಿದೆ ಎಂದು ಹೇಳಿ ಮಾತು ಆರಂಭಿಸಿ ನವೀನ್ ಏಕಾಏಕಿ ಚೀಲದಲ್ಲಿದ್ದ ಮಚ್ಚು ತೆಗೆದು ಸಿಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸೋಮವಾರ ಮಾಹಿತಿ ನೀಡಿದ್ದರು.
ಇನ್ನು ಆರೋಪಿ ನವೀನ್ ಶಾಕಿಂಗ್ ವಿಚಾರವೊಂದನ್ನು ಬಾಯ್ಬಿಟ್ಟಿದ್ದು, ಲೆಕ್ಚರರ್ ವೀಣಾ ನನ್ನ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಲೆಕ್ಚರರ್ ವೀಣಾ ನನ್ನನ್ನು ಅವಮಾನಿಸಿ, ಕಿರುಕುಳ ನೀಡುತ್ತಿದ್ದರು. ಅವರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದು, ಅದರಿಂದ ನನಗೆ ತೊಂದರೆಯಾಗುತ್ತಿದೆ ಎಂದಿದ್ದಾನೆ.
ಇದೇ ಕಾರಣಕ್ಕೆ ನಿನ್ನೆ ಬ್ಲ್ಯಾಕ್ ಮ್ಯಾಜಿಕ್ ತೆಗೆಯುವಂತೆ ಹೇಳಲು ಕಚೇರಿಗೆ ಬಂದಿದ್ದೆ. ಆದರೆ ವೀಣಾ ಆಫೀಸಿಗೆ ಬಂದಿಲ್ಲ ಎಂದು ಹೇಳಿದರು. ಇದರಿಂದ ಕೋಪ ಬಂದು ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.